ಮಕ್ಕಳೇ, ಹನುಮಂತ :ಬ್ರಹ್ಮತೇಜ ಮತ್ತು ಕ್ಷಾತ್ರತೇಜದ ಪ್ರತೀಕ


ಬ್ರಹ್ಮತೇಜ ಮತ್ತು ಕ್ಷಾತ್ರತೇಜದ ಪ್ರತೀಕ ಹನುಮಂತ
ಹನುಮಂತನು ಧರಿಸಿರುವ ಜನಿವಾರವು ಬ್ರಹ್ಮತೇಜದ ಪ್ರತೀಕವಾಗಿದೆ. ಹನುಮಂತನು ಶಿವನ ಅವತಾರವಾಗಿರುವುದರಿಂದ ಅವರಲ್ಲಿ ಲಯ ಮಾಡುವ ಸಾಮರ್ಥ್ಯವಿದೆ. ರಾಮನ ಭಕ್ತನಾದ ಕಾರಣ ಅವರಲ್ಲಿ ವಿಷ್ಣುವಿನ ತತ್ತ್ವವಿದೆ. ಹೀಗಾಗಿ ಅವರಲ್ಲಿ ಸ್ಥಿತಿ ಅಂದರೆ ಸಾತ್ತ್ವಿಕ ತತ್ತ್ವವೂ ಇದೆ. ಹನುಮಂತನಲ್ಲಿ ಬ್ರಹ್ಮತೇಜ ಮತ್ತು ಕ್ಷಾತ್ರತೇಜ ಎರಡೂ ಇರುವುದರಿಂದ ಯುದ್ಧದಲ್ಲಿ ಹನುಮಂತನು ಅವಶ್ಯಕತೆ ಅನುಸಾರ ಅದನ್ನು ಉಪಯೋಗಿಸುತ್ತಾರೆ. ಕೌರವ ಪಾಂಡವರ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನ ರಥದ ಮೇಲೆ ಹನುಮಂತನಿಗೆ ಸ್ಥಾನವನ್ನು ನೀಡಿದರು. ಆಗ ಅರ್ಜುನ ಮತ್ತು ಶ್ರೀ ಕೃಷ್ಣನ ಮೇಲೆ ಬರುವ ಎಲ್ಲಾ ಆಯುಧಗಳನ್ನು ಹನುಮಂತನು ನಷ್ಟ ಮಾಡುತ್ತಿದ್ದರು.
ಭೂತ, ರಾಕ್ಷಸ ಮುಂತಾದ ಕೆಟ್ಟ ಶಕ್ತಿಗಳಿಂದ ರಕ್ಷಣೆ                         
ಎಲ್ಲಾ ದೇವತಗಳಲ್ಲಿ ಕೇವಲ ಹನುಮಂತನಿಗೆ ಕೆಟ್ಟ ಶಕ್ತಿಗಳು ತೊಂದರೆ ನೀಡಲಾರವು. ಲಂಕೆಯಲ್ಲಿ ಲಕ್ಷಗಟ್ಟಲೆ ರಾಕ್ಷಸರಿದ್ದರೂ ಅವರು ಹನುಮಂತನನ್ನು ಏನೂ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಹನುಮಂತನಿಗೆ ಭೂತಗಳ ನಾಯಕ ಎಂದು ಕರೆಯುತ್ತಾರೆ. ಯಾರಿಗಾದರು ಕೆಟ್ಟಶಕ್ತಿಗಳ ತೊಂದರೆಯಾದರೆ ಅವರು ಹನುಮಂತನ ಮಂದಿರಕ್ಕೆ ಹೋಗಿ ಹನುಮಾನ ಸ್ತೋತ್ರ ಪಠಣ ಮಾಡುತ್ತಾರೆ. ತೊಂದರೆ ಹೋಗದಿದ್ದರೆ ತೊಂದರೆ ಇರುವ ವ್ಯಕ್ತಿಗೆ ತೆಂಗಿನಕಾಯಿ ದೃಷ್ಟಿಯನ್ನು ತೆಗೆಯುತ್ತಾರೆ. ದೃಷ್ಟಿ ತೆಗೆಯುವಾಗ ಮನುಷ್ಯನಲ್ಲಿರುವ ಕೆಟ್ಟಶಕ್ತಿಗಳು ತೆಂಗಿನಕಾಯಿಯ ಒಳಗೆ ಬರುತ್ತದೆ. ಆ ತೆಂಗಿನಕಾಯಿಯನ್ನು ದೇವಸ್ಥಾನದಲ್ಲಿ ಒಡೆಯುವುದರಿಂದ ಹನುಮಂತನ ಶಕ್ತಿಯಿಂದ ಆ ಕೆಟ್ಟಶಕ್ತಿಯು ನಷ್ಟವಾಗುತ್ತದೆ ನಂತರ ಆ ತೆಂಗಿನಕಾಯಿಯನ್ನು ವಿಸರ್ಜಿಸಲಾಗುತ್ತದೆ.
ಯಾರದು ಮದುವೆ ಆಗಿರುವುದಿಲ್ಲವೋ ಅವರಲ್ಲಿ ಸಾಧಾರಣವಾಗಿ ೩೦ಶೇ. ಕಾರಣಗಳು ಕೆಟ್ಟಶಕ್ತಿಗಳ ತೊಂದರೆಯಿಂದಾಗಿ ಆಗುತ್ತದೆ. ಹನುಮಂತನ ಆರಾಧನೆಯಿಂದಾಗಿ ಎಲ್ಲಾ ತೊಂದರೆಗಳು ದೂರವಾಗುತ್ತದೆ ಮತ್ತು ಮದುವೆಯಾಗುತ್ತದೆ. (೧೦ಶೇ. ಮದುವೆಗಳು ಭಾವಿ ವಧು ಅಥವಾ ವರರು ಹೀಗಿರಬೇಕೆಂಬ ಅಪೇಕ್ಷೆಯಿಂದ ಆಗುತ್ತದೆ. ಈ ಅಪೇಕ್ಷೆಯು ಕಡಿಮೆ ಆದರೆ ಮದುವೆ ಆಗುತ್ತದೆ. ೫೦ಶೇ. ಪ್ರಾರಾಬ್ಧಕ್ಕನುಸಾರ ಮದುವೆ ಆಗುವುದಿಲ್ಲ. ಅದಕ್ಕಾಗಿ ಮಂದ, ಮಧ್ಯಮ ಪ್ರಾರಾಬ್ಧನುಸಾರ ಕುಲದೇವರ ಉಪಾಸನೆ ಇಂದ ಕಡಿಮೆ ಆಗುತ್ತದೆ. ತೀವ್ರ ಪ್ರಾರಾಬ್ಧ ಕೇವಲ ಸಂತ ಕೃಪೆ ಇಂದ ಕಡಿಮೆ ಆಗುತ್ತದೆ. ಉಳಿದ ೧೦ ಶೇ. ಇತರ ಕಾರಣಗಳಿಂದ ಆಗುವುದಿಲ್ಲ, ಅದಕ್ಕನುಸಾರ ಉಪಾಯ ಮಾಡಿದರೆ ಮದುವೆ ಆಗುತ್ತದೆ.) 

ಮಕ್ಕಳೇ,ನಿಮಗೆ ಹನುಮಂತನ ಮಹಾಪರಾಕ್ರಮದ ಬಗ್ಗೆ ಗೊತ್ತಾ?..


ಮಹಾಪರಾಕ್ರಮಿ
ರಾಮ ರಾವಣರ ಯುದ್ಧದಲ್ಲಿ ಬ್ರಹ್ಮಾಸ್ತ್ರದ ಮುಂದೆ ರಾಮ, ಲಕ್ಷ್ಮಣ, ಸುಗ್ರೀವರು ಮೂರ್ಛೆ ಹೋದರು. ಆಗ ಜಾಂಬವಂತನು ಹೇಳುತ್ತಾನೆ- ವಾನರ ಶ್ರೇಷ್ಠ  ಹನುಮಂತನು ಜೀವಂತನಿದ್ದಾನೆ ತಾನೆ? ಹನುಮಂತನು ಒಬ್ಬನಿದ್ದರೂ ಸಾಕು, ಬೇರೆ ಸೈನ್ಯ ನಾಶವಾದರೂ ಏನೂ ಚಿಂತೆಯಿಲ್ಲ. ಆದರೆ ಹನುಮಂತನು ಪ್ರಾಣತ್ಯಾಗ ಮಾಡಿದರೆ ನಾವು ಬದುಕಿದ್ದು ಸತ್ತಂತೆಯೇ. ಹನುಮಂತನು ಜಂಬು-ಮಾಳಿ, ಅಕ್ಷ, ಧುಮ್ರಾಕ್ಷ, ನಿಕುಂಭ ಮುಂತಾದ ರಾಕ್ಷಸರನ್ನು ವಧಿಸಿದನು. ಅವನು ರಾವಣನನ್ನೂ ಮೂರ್ಛೆ ಹೋಗುವಂತೆ ಮಾಡಿದ್ದಾನೆ. ಸಮುದ್ರ ಲಂಘನ, ಲಂಕಾದಹನ, ದ್ರೋಣಗಿರಿ ಪರ್ವತವನ್ನು ತರುವುದು ಮುಂತಾದ ಪ್ರಸಂಗಗಳು ಹನುಮಂತನ ಪರಾಕ್ರಮಕ್ಕೆ ಉದಾಹರಣೆಗಳಾಗಿವೆ.
ಅತ್ಯಂತ ಬಲಶಾಲಿ ಹನುಮಂತನು ಸೀತೆಯನ್ನು ಹುಡುಕುತ್ತಾ ೩೨ ಕಿಲೋಮೀಟರ ಸಮುದ್ರವನ್ನು ಒಂದೇ ನೆಗೆತಕ್ಕೆ ಹಾರುತ್ತಾರೆ. ಇದನ್ನು ವಾಲ್ಮೀಕಿ ರಾಮಾಯಣದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಯಂ ಯಂ ದೇಶಂ ಸಮುದ್ರಸ್ಯ ಜಾಗಮ ಸ ಮಹಾಕಪಿಃ |
ತಸ್ಯ ತಸ್ಯೋರುವೆಗೇನ ಸೋನ್ಮಾದ ಇವ ಲಕ್ಷ್ಯತೆ ||
ಅರ್ಥ: ಮಹಾಕಪಿಯು (ಹನುಮಂತನು) ಸಮುದ್ರದ ಯಾವ ಭಾಗದಿಂದ ಹಾರುತ್ತಿದ್ದನೋ, ಆ ಭಾಗವು ಹನುಮಂತನ ತೊಡೆಗಳ ವೇಗದಿಂದ ಉನ್ಮತ್ತವಾಗಿರುವಂತೆ ಕಾಣಿಸುತ್ತದೆ. ಇದರಿಂದಲೇ ಹನುಮಂತನ ಶೌರ್ಯವು ಏನೆಂದು ತಿಳಿಯುತ್ತದೆ. - ಶ್ರೀ. ಅರುಣ ಪಾಂಢರಿಪಾಂಡೆ (ಮರಾಠಿ ಗ್ರಂಥ: ವಿಸ್ಮರಣ ಜಾಲೇಲಿ ಸತ್ಯ)
ಅನೇಕ ಕಲೆ, ನೈಪುಣ್ಯ, ಗುಣ ಸಂಪನ್ನಜ್ಞಾನ, ವಿಜ್ಞಾನ,  ಕಲಾಸಂಪನ್ನ ಮತ್ತು ಉನ್ನತರ ಪ್ರಮುಖ ನಾಯಕರಾಗಿರುವ ಹನುಮಂತನು ವಿದ್ಯಾವಿಭೂಷಿತನು, ಜ್ಯೋತಿಷ್ಯ ಶಾಸ್ತ್ರ ಪಾರಂಗತರಾಗಿದ್ದಾರೆ. ಬಲ, ಬುದ್ಧಿ, ವಿದ್ಯಾ, ಶೌರ್ಯ ಮತ್ತು ಪರಾಕ್ರಮ ಮುಂತಾದ ಅದ್ವಿತೀಯ ಗುಣಗಳ ಘನಿಯಾಗಿದ್ದನು. ಹನುಮಂತನು ಭಾಷೆ ಕೋವಿದನಾಗಿದ್ದು, ವೇದ ಮತ್ತು ವ್ಯಾಕರಣವನ್ನು ತಿಳಿದವರಾಗಿದ್ದಾರೆ.
 ವೀಣಾವಾದನವನ್ನು ಮಾಡಲು ಬರುವ ಹನುಮಂತನು ಮೂರು ಪ್ರಮುಖ ಸಂಗೀತಕಾರರಲ್ಲಿ ಒಬ್ಬರಾಗಿದ್ದಾರೆ. (ಸಂಗೀತಾಚಾರ್ಯ ಶಾರ್ದೂಲ ಮತ್ತು ಕಹಾಲ ಇನ್ನಿಬ್ಬರಾಗಿದ್ದಾರೆ.) ’ಸಂಗೀತ ಪಾರಿಜಾತ’ ಎಂಬ ಗ್ರಂಥವು ಹನುಮಂತನ ಸಂಗೀತ ಸಿದ್ಧಾಂತವನ್ನಾಧರಿಸಿದ್ದಾಗಿದೆ. ಅವರು ಪ್ರತಿಪಾದಿಸಿದ ಹನುಮತ್ ಸಂಗೀತ ಪದ್ಧತಿಗೆ ವಿಶಿಷ್ಟ ಸ್ಥಾನವಿದೆ. ಹನುಮಂತನೆಂದರೆ ಭಕ್ತಿ, ಶಕ್ತಿ ಮತ್ತು ಯುಕ್ತಿ. ಇವರು ಶ್ರೇಷ್ಠ ವ್ಯಾಕರಣಕಾರರಾಗಿದ್ದರು. ಇವರ ವ್ಯಾಕರಣ ಶಾಸ್ತ್ರ, ಸೂತ್ರ ಮುಂತಾದವುಗಳಲ್ಲಿ ಅತ್ಯಂತ ಮಹತ್ವದ ಪ್ರಭುತ್ವ ಇತ್ತು. - ಶ್ರೀ. ಅರುಣ ಪಾಂಢರಿಪಾಂಡೆ (ಮರಾಠಿ ಗ್ರಂಥ: ವಿಸ್ಮರಣ ಜಾಲೇಲಿ ಸತ್ಯ)

ಮಕ್ಕಳೇ, ನಿಮಗೆ ಹನುಮಂತನ ಜನ್ಮ ಇತಿಹಾಸ ತಿಳಿದಿದೆಯೇ?...



ಹನುಮಾನ ಜಯಂತಿ:ತಿಥಿ
ಹನುಮಾನ ಜಯಂತಿಯು ಕೆಲವು ಪಂಚಾಂಗಗಳಲ್ಲಿ ಆಶ್ವಯುಜ ಕೃಷ್ಣ ಚತುರ್ದಶಿ ಇದ್ದರೆ ಕೆಲವಲ್ಲಿ ಚೈತ್ರ ಹುಣ್ಣಿಮೆಯೆಂದು ಇರುತ್ತದೆ.
ಜನ್ಮ ಇತಿಹಾಸ
ದಶರಥ ಮಹಾರಾಜನು ಪುತ್ರ ಪ್ರಾಪ್ತಿಗಾಗಿ ಪುತ್ರಕಾಮೇಷ್ಟಿ ಯಾಗವನ್ನು ಮಾಡಿದನು. ಯಾಗದಲ್ಲಿ ಅಗ್ನಿದೇವನು ಪತ್ಯಕ್ಷನಾಗಿ ದಶರಥ ಮಹಾರಾಜರ ಹೆಂಡತಿಯರಿಗೆ ಪಾಯಸವನ್ನು ನೀಡಿದರು. ದಶರಥನ ರಾಣಿಯರಂತೆ ತಪಸ್ಸನ್ನು ಮಾಡಿದ ಅಂಜನಾದೇವಿಗೂ ಪಾಯಸವನ್ನು ನೀಡಲಾಯಿತು. ಈ ಪ್ರಸಾದದ ಫಲವೇ ಹನುಮಂತನು.ಅಂದು ಚೈತ್ರ ಹುಣ್ಣಿಮೆಯಾಗಿತ್ತು. ಅದರ ಕಾರಣ ಚೈತ್ರ ಹುಣ್ಣಿಮೆಯನ್ನು ಹನುಮಾನ ಜಯಂತಿ ಎಂದು ಆಚರಿಸುತ್ತಾರೆ. ವಾಲ್ಮೀಕಿ ರಾಮಾಯಣದಲ್ಲಿ (ಕಿಷ್ಕಿಂಧಾ ಖಂಡ: ಸರ್ಗ ೬೬) ಹನುಮಂತನ ಕುರಿತು ಈ ರೀತಿ ಹೇಳಲಾಗಿದೆ: ಹನುಮಂತನು ಅಂಜನಾದೇವಿಯ ಮಗನಾಗಿ ಹುಟ್ಟಿದ್ದನು. ಅವನು ಒಂದು ದಿನ ಮುಳುಗುತ್ತಿರುವ ಸೂರ್ಯನನ್ನು ನೋಡಿ ಹಣ್ಣು ಎಂದು ತಿಳಿದು ಸೂರ್ಯನ ಕಡೆ ನುಗಿದನು. ಆ ದಿನ ಸೂರ್ಯನನ್ನು ನುಂಗಲು ರಾಹು ಬಂದಿದ್ದನು. ಹನುಮಂತನನ್ನು ರಾಹು ಎರಡನೇ ಸಲ ಬಂದಿದ್ದಾನೆಂದು ತಿಳಿದು ವಜ್ರಾಯುಧವನ್ನು ಅವನತ್ತ ಎಸೆದನು. ಅದು ಹನುಮಂತನ ಗಲ್ಲಕ್ಕೆ ಹೊಡೆಯಿತು. ಅಂದಿನಿಂದ ಹನುಮಂತನ ಮುಖವು ಊದಿಕೊಂಡಿತು.
ಹನುಮಾನ ಜಯಂತಿ ಹೇಗೆ ಆಚರಿಸುತ್ತಾರೆ?
ಆ ದಿನ ಸೂರ್ಯೋದಯಕ್ಕೆ ಮುಂಚೆಯೇ ಹನುಮಾನ ದೇವಸ್ಥಾನಗಳಲ್ಲಿ ಭಜನೆಗಳನ್ನು ಪ್ರಾರಂಭಿಸಿರುತ್ತಾರೆ. ಸೂರ್ಯೋದಯಕ್ಕೆ ಹನುಮಂತನ ಜನನವಾಗುತ್ತದೆ ಮತ್ತು ಭಜನೆ ನಿಲ್ಲುತ್ತದೆ. ನಂತರ ಹನುಮಂತನ ಮೂರ್ತಿ ಪೂಜೆ ಮಾಡುತ್ತಾರೆ ಮತ್ತು ಶುಂಠಿಪುಡಿಯನ್ನು ಪ್ರಸಾದವಾಗಿ ನೀಡುತ್ತಾರೆ.
ಹನುಮಾನ ಜಯಂತಿಗೆ ಹನುಮಂತನ ಜಪವನ್ನು ಯಾಕೆ ಹೆಚ್ಚು ಹೆಚ್ಚು ಮಾಡಬೇಕು?
ಈ ದಿನದಂದು ಹನುಮಾನ ತತ್ತ್ವವು ಇತರ ದಿನಗಳಿಗಿಂತ ೧೦೦೦ ಪಟ್ಟು ಅಧಿಕ ಕಾರ್ಯನಿರತವಾಗಿರುತ್ತದೆ. ಇಂದು "ಶ್ರೀ ಹನುಮತೇ ನಮಃ" ಎಂದು ಜಪ ಮಾಡುವುದರಿಂದ ೧೦೦೦ ಪಟ್ಟು ಅಧಿಕ ಲಾಭವಾಗುತ್ತದೆ.
ಕಠೋರ ತಪಸ್ಸನ್ನಾಚರಿಸದರಿಂದ ಸಾಕ್ಷತ್ ಶಿವನೇ ಅಂಜನೆಯ ಮಗನಾಗಿ ಹುಟ್ಟುವುದು
ಮುನಿಗಳ ಆದೇಶದಂತೆ ಅಂಜನೆಯು ವಾಯುದೇವನ ಪೂಜೆಯನ್ನು ಮಾಡುತ್ತಿದ್ದಳು. ವಾಯುದೇವನು ಪ್ರಸನ್ನನಾಗಿ ನಾನು ಹುಟ್ಟಿ ಬರುತ್ತೇನೆಂದು ವರ ನೀಡುತ್ತಾನೆ. ಕೆಲವು ವರ್ಷಗಳು ಕಳೆಯುತ್ತದೆ ಆದರೆ ಅಂಜನೆಗೆ ಮಕ್ಕಳಾಗುವುದಿಲ್ಲ. ಅವಳು ಚಡಪಡಿಸುತ್ತಾಳೆ. ಭಗವಾನ ಶಿವನ ಆರಾಧನೆಯನ್ನು ಮಾಡುತ್ತಾಳೆ. ಕೆಲವು ವರ್ಷಗಳೇ ಕಳೆಯುತ್ತದೆ. ಶಿವನು ಪ್ರಸನ್ನನಾಗಿ ನಾನು ನಿನ್ನ ಮಗನಾಗಿ ಹುಟ್ಟಿ ಬರುತ್ತೇನೆಂದು ವರ ನೀಡುತ್ತಾನೆ. ಅವಳಿಗೆ ಮಂತ್ರ ನೀಡುತ್ತಾನೆ. ಅವಳು ಜಪಕ್ಕೆ ಕೂರುತ್ತಾಳೆ. ಮೇಲೆ ಹದ್ದು ಪಾಯಸದ ಪಾತ್ರೆಯನ್ನು ತೆಗೆದುಕೊಂಡು ಹೊಗುತ್ತಿರುತ್ತದೆ. ಆಗ ಜೋರಾಗಿ ಬಿರುಗಾಳಿಯು ಬೀಸುತ್ತದೆ. ಆಗ ಹದ್ದು ಹೆದರಿ ಕಂಪಿಸುತ್ತದೆ. ಹದ್ದಿನ ರಕ್ಕೆಗಳು ಮತ್ತು ಪಾಯಸದ ಪಾತ್ರೆಯು ಅಲುಗಾಡುತ್ತದೆ. ಪಾತ್ರೆಯು ಕೆಳಗೆ ಅಂಜನೆಯ ಕೈಗೆ ಬೀಳುತ್ತದೆ. ವಾಯುದೇವ ಮತ್ತು ಶಿವನ ಆಶೀರ್ವಾದವೆಂದು ಅಂಜನೆಯು ಅದನ್ನು ಕುಡಿಯುತ್ತಾಳೆ. ನಂತರ ಅಂಜನೆಗೆ ಗಂಡು ಮಗುವಾಗುತ್ತದೆ.

ಮಕ್ಕಳೇ,ನಿಮಗೆ ಸತ್ಸೇವೆಯ ಮಹತ್ವ ತಿಳಿದಿದೆಯೇ?..


ಸತ್ಸೇವೆಯ ಮಹತ್ವ
ಪ್ರಭು ಶ್ರೀರಾಮನು ರಾವಣನ ಕೈಯಿಂದ ಸೀತಾದೇವಿಯನ್ನು ಬಿಡಿಸಲು ಲಂಕೆಗೆ ಹೋಗುತ್ತಿದ್ದರು. ಆದರೆ ದಾರಿಯಲ್ಲಿ ಸಮುದ್ರ ಇತ್ತು. ಸಮುದ್ರವನ್ನು ದಾಟಿ ಹೇಗೆ ಲಂಕೆಗೆ ಹೋಗಬಹುದು? ಆಗ ವಾನರ ಸೇನೆ ಮತ್ತು ಹನುಮಂತನು ತೀರ್ಮಾನ ಮಾಡಿದರು, ಸಮುದ್ರದಲ್ಲಿ ಕಲ್ಲನ್ನು ಹಾಕಿ ಸೇತುವೆಯನ್ನು ಕಟ್ಟುವುದು ಮತ್ತು ಅದರ ಮೇಲೆ ನಡೆದು ಹೋಗುವುದು. ಏನು ಆಶ್ಚರ್ಯ! ಅವರು ಕಲ್ಲು ಹಾಕಿದ ತಕ್ಷಣ ಕಲ್ಲು ನೀರಿನಲ್ಲಿ ತೇಲುತ್ತಿದ್ದವು ಮತ್ತು ಕೆಲವು ದಿನಗಳಲ್ಲೇ ಸೇತುವೆಯು ತಯಾರಾಯಿತು.
ಯಾವಾಗ ಎಲ್ಲಾ ವಾನರರು ಸೇತುವೆಯನ್ನು ಕಟ್ಟುತ್ತಿದ್ದರು, ಅವರನ್ನು ಒಂದು ಅಳಿಲು ನೋಡಿತು. ಅದು ವಿಚಾರ ಮಾಡಿತು, "ಶ್ರೀರಾಮನು ಸಾಕ್ಷಾತ್ ದೇವರಿದ್ದಾರೆ. ಶ್ರೀರಾಮನ ಸೇವೆ ಎಂದು ಈ ವಾನರರು ಸೇತುವೆಯನ್ನು ಕಟ್ಟುತ್ತಿದ್ದಾರೆ. ಹಾಗಿದ್ದರೆ ನಾನು ಕೂಡ ಅವರಿಗೆ ಸಹಾಯ ಮಾಡುವೆನು. ಇದು ಕೂಡ ಅವರ ಸೇವೆಯಾಗಿದೆ." ಅದು ಕೂಡಲೆ ಒಂದು ಸಣ್ಣ ಕಲ್ಲನ್ನು ತನ್ನ ಕೈಯಲ್ಲಿ ಹಿಡಿದು ಸಮುದ್ರದಲ್ಲಿ ಎಸೆಯಲು ಪ್ರಾರಂಭಿಸಿತು. ಇದನ್ನು ನೋಡಿ ವಾನರರಿಗೆ ಆಶ್ಚರ್ಯ ಅನಿಸಿತು. ಅವರು ಕೇಳಿದರು," ಏ ಅಳಿಲೇ, ನೀನು ಕಣ ಕಣಗಳನ್ನು ತಂದು ಹಾಕುತ್ತಿದ್ದೀಯಾ, ಅದರಿಂದ ಸೇತು ಕಟ್ಟಲು ಆಗುತ್ತದೆಯಾ? ಆಗ ಅಳಿಲು ಹೇಳಿತು," ವಾನರಣ್ಣ ನಾನು ನಿಮ್ಮ ರೀತಿ ದೊಡ್ಡ ದೊಡ್ಡ ಕಲ್ಲು ತರಲು ಸಾಧ್ಯವಿಲ್ಲ. ನಿಮ್ಮ ರೀತಿ ಸೇತುವೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ನಾನು ಸಣ್ಣ ಕಲ್ಲನ್ನು ಹಾಕುತ್ತಿದ್ದೇನೆ. ನನ್ನ ಕಡೆಯಿಂದ ಸೇವೆಯು ಆಗಲಿ, ಚಿಕ್ಕದಾದರೂ ಪರವಾಗಿಲ್ಲ." ಹೀಗೆ ಹೇಳಿದ ಅಳಿಲು ಮತ್ತೆ ಮರಳನ್ನು ತರಲು ಹೋಯಿತು. ಹೀಗೆ ತುಂಬಾ ಸಲ ಮಾಡಿದ ನಂತರ ಅಳಿಲಿಗೆ ಸುಸ್ತಾಯಿತು. ಸುಸ್ತಾದರೂ ನಿಲ್ಲದ ಅಳಿಲು ಸೇವೆಯನ್ನು ಮುಂದುವರೆಸಿತು. ಅಳಿಲು ಮನಸ್ಸಿನಲ್ಲಿ ಏನು ವಿಚಾರ ಮಾಡುತ್ತಿದ್ದಿತು ಗೊತ್ತಿದೆಯಾ? ನನ್ನ ದೇಹದಲ್ಲಿ ಎಲ್ಲಿವರೆಗೆ ಸ್ವಲ್ಪವಾದರೂ ಶಕ್ತಿ ಇದೆಯೋ ಅಲ್ಲಿಯ ವರೆಗೂ ನಾನು ಶ್ರೀರಾಮನ ಸೇವೆ ಮಾಡುವೆನು. ಹೀಗೆ ಹೇಳಿ ಮತ್ತೆ ಸೇವೆ ಮಾಡಲು ಅಳಿಲು ಹೋಗುತ್ತಿರುವಾಗ ಅಳಿಲನ್ನು ಪ್ರೀತಿಯಿಂದ ಒಬ್ಬರು ನೋಡಿದರು, ಯಾರು ತಿಳಿಯಿತೇ, ಪ್ರತ್ಯಕ್ಷ ಪ್ರಭು ಶ್ರೀರಾಮನೇ ಅಳಿಲನ್ನು ಪ್ರಿತಿಯಿಂದ ನೋಡಿದರು ಮತ್ತು ಅಳಿಲನ್ನು ಕೈಯಲ್ಲಿ ಎತ್ತಿಕೊಂಡರು. ಶ್ರೀರಾಮನು ಅವರಿಗೆ ಹೇಳಿದರು, "ಅಳಿಲೇ ನೀನು ತುಂಬಾ ಚಿಕ್ಕವಳಿದ್ದೀಯಾ ಆದರೂ ತುಂಬಾ ಒಳ್ಳೆ ಸೇವೆಯನ್ನು ಮಾಡಿದ್ದೀಯ. ನಾನು ಪ್ರಸನ್ನನಾಗಿದ್ದೇನೆ. ಶ್ರೀರಾಮನು ತನ್ನ ಬಲಗೈಯ ಮಧ್ಯದ ಮೂರು ಬೆರಳನ್ನು ಅಳಿಲಿನ ಬೆನ್ನಿನ ಮೇಲೆ ಸವರಿದರು. ಹೀಗಾಗಿ ಅಳಿಲಿನ ವಂಶಸ್ಥರ ಮೇಲೆಲ್ಲ ಪ್ರಭು ಶ್ರೀರಾಮನ ಬೆರಳಿನ ಗುರುತಿರುತ್ತದೆ. ಶ್ರೀರಾಮನು ಹೇಳಿದರು "ಯಾರ‍್ಯಾರು ನಿನ್ನ ರೀತಿ ಸೇವೆ ಮಾಡುತ್ತಾರೆಯೋ ಅವರ ಮೇಲೆ ನಾನು ಪಸನ್ನನಾಗುತ್ತೇನೆ. ಅವರಿಗೆ ಜೀವನದಲ್ಲಿ ಯಾವುದೇ ಕಷ್ಟವು ಬರದಂತೆ ನಾನು ನೋಡುತ್ತೇನೆ. ತಿಳಿಯಿತಾ, ನಾವು ದೇವರ ಸೇವೆ ಮಾಡಿದರೆ ನಮಗೆ ಎಂದೂ ಕಷ್ಟವಾಗುವುದಿಲ್ಲ. ಹಾಗಿದ್ದರೆ ನಮಗೆ ದೇವರ ಕೃಪೆ ಎಂದು ಆಗುವುದು? ಅಳಿಲಿಗೆ ದೇವರ ಕೃಪೆಯಾಕಾಯಿತು?

ಮಕ್ಕಳೇ, ಸೇವಾ ಎಂದರೆ ಏನು? ಸೇವೆ ಎಂದರೆ ದೇವರಿಗೆ ಇಷ್ಟವಾಗುವಂತೆ ಸೇವೆ ಮಾಡುವುದು. ದೇವರ ಸೇವೆಯಲ್ಲಿ ಸಹಭಾಗಿಯಾಗುವುದೆಂದರೆ ದೇವರಿಗೆ ಇಷ್ಟವಾಗುವ ಸೇವೆ ಮಾಡುವುದು. ಹೇಗೆ ನಮ್ಮ ಅಮ್ಮ ನಮ್ಮನ್ನು ಪ್ರೀತಿಸುತ್ತಾರೋ ಹಾಗೆ ದೇವರೂ ಸಹ ನಮ್ಮನ್ನು ಪ್ರೀತಿಸುತ್ತಾರೆ.
                                                       ರೆ

ಮಕ್ಕಳೇ,ರಾಮನಿಲ್ಲದಿದ್ದರೆ ಮುತ್ತಿನ ಹಾರವೂ ಸಹ ಕವಡೆ ಬೆಲೆಯದ್ದು ಎಂದು ಯಾರು ಹೇಳಿದರು?....


ರಾಮನಿಲ್ಲದಿದ್ದರೆ ಮುತ್ತಿನ ಹಾರವೂ ಸಹ ಕವಡೆ ಬೆಲೆಯದ್ದು
ಒಂದು ಸಲ ಶ್ರೀರಾಮ ಮತ್ತು ಸೀತಾಮಾತೆಯನ್ನು ಭೇಟಿಯಾಗಲು ಹನುಮಂತನು ಬರುತ್ತಾನೆ ಮತ್ತು ಅವರಿಗೆ ಮನಸಾರೆ ನಮಸ್ಕಾರವನ್ನು ಮಾಡುತ್ತಾರೆ. ಆಗ ಸೀತಾದೇವಿಗೆ ಅನಿಸುತ್ತದೆ, ಹನುಮಂತನು ನನ್ನ ಸ್ವಾಮಿಯ ಭಕ್ತನಿದ್ದಾನೆ. ಅವನು ಯಾವಾಗಲೂ ಸೇವೆ ಮಾಡುತ್ತಿರುತ್ತಾನೆ, ಅವನಿಗೆ ಏನಾದರೂ ನೀಡಬೇಕು. ಹೀಗೆ ಅನಿಸಿದ ತಕ್ಷಣ ಸೀತಾದೇವಿಯು ತನ್ನ ಕೊರಳಿನಲ್ಲಿರುವ ಮುತ್ತಿನ ಹಾರವನ್ನು ಹನುಮಂತನಿಗೆ ನೀಡುತ್ತಾಳೆ ಮತ್ತು ನಾನು ಪ್ರಸನ್ನಳಾಗಿದ್ದೇನೆ ಎಂದು ಹೇಳುತ್ತಾಳೆ.
ಮಾಲೆಯನ್ನು ಪಡೆದ ಹನುಮಂತನು ಮುಂದೆ ಹೋಗಿ ಕೂತು ಪ್ರತಿಯೊಂದು ಮಣಿಯನ್ನು ದಾರದಿಂದ ತೆಗೆದು ನೋಡಿ ನೋಡಿ ಒಡೆಯುತ್ತಾನೆ. ಈ ರೀತಿ ಎಲ್ಲಾ ಮಣಿಗಳನ್ನು ಒಡೆದು ಹಾಕುತ್ತಾನೆ.
ಇದನ್ನು ನೋಡಿದ ಸೀತಾದೇವಿಯು ಸಿಟ್ಟಿನಿಂದ ಕೇಳಿದಳು," ನಾನು ಪ್ರೀತಿಯಿಂದ ನೀಡಿದ ಹಾರವನ್ನು ಯಾಕೆ ಹೀಗೆ ಮಾಡಿದೆ?"
ಹನುಮಂತನು ಹೇಳಿದನು, "ಈ ಮಾಲೆಯ ಯಾವ ಮಣಿಯಲ್ಲಿ ನನಗೆ ರಾಮನು ಕಾಣುತ್ತಾನೆಂದು ನೋಡುತ್ತಿದ್ದೆ. ಯಾವ ಮಣಿಯಲ್ಲಿ ರಾಮನು ಕಾಣಲಿಲ್ಲವೊ ಅದನ್ನು ನಾನು ಒಡೆದುಹಾಕಿದೆ."
ಇದನ್ನು ಕೇಳಿದ ಸೀತಾಮಾತೆಗೆ ತಿಳಿಯಿತು, ಹಾರವನ್ನು ನಾನು ಕೊಡುತ್ತಿದ್ದೇನೆಂಬ ಭಾವದಲ್ಲಿ ಅವಳು ಹಾರವನ್ನು ನೀಡುವಾಗ ರಾಮನ ಸ್ಮರಣೆ ಮಾಡಿರಲಿಲ್ಲ. ಎಲ್ಲವನ್ನೂ ಶ್ರೀರಾಮನೇ ಮಾಡುವುದು.

ಸೀತಾದೇವಿಯು ಹನುಮಂತನ ಕ್ಷಮೆ ಕೇಳುತ್ತಾಳೆ ಮತ್ತು ಶ್ರೀರಾಮನ ಸ್ಮರಣೆ ಮಾಡುತ್ತಾ ಮತ್ತೊಂದು ಹಾರವನ್ನು ನೀಡುತ್ತಾಳೆ. ಅದನ್ನು ತಕ್ಷಣ ಹನುಮಂತನು ತನ್ನ ಕೊರಳಿಗೆ ಹಾಕಿಕೊಳ್ಳುತ್ತಾನೆ.
ಮಕ್ಕಳೇ, ಯಾವುದು ದೇವರ ಸ್ಮರಣೆ ಮಾಡಿಕೊಡುತ್ತದೆಯೊ ಅದು ಹನುಮಂತನಿಗೆ ಪ್ರಿಯವಾಗುತ್ತದೆ. ನಾವು ಕೂಡ ಪ್ರತಿಯೊಂದು ಕೃತಿಯನ್ನು ಕುಲದೇವರ ನಾಮಜಪದೊಂದಿಗೆ ಮತ್ತು ದೇವರಿಗೆ ಪ್ರಾರ್ಥನೆಯನ್ನು ಮಾಡಿ ಮಾಡಬೇಕು

ಮಕ್ಕಳೇ ಗರ್ವದಿಂದ ಏನಾಗುತ್ತದೆಂದು ನಿಮಗೆ ತಿಳಿದಿದೆಯೇ??...


ಶ್ರೀಕೃಷ್ಣ ಮತ್ತು ಗೋವರ್ಧನ ಪರ್ವತ
ಭಗವಾನ ಶ್ರೀಕೃಷ್ಣ ಎಲ್ಲಾರಿಗೂ ಗೊತ್ತಿದಾರೆ ಅಲ್ವಾ? ಅವರು ಗೋಕುಲದಲ್ಲಿ ವಾಸಿಸುತ್ತಿದ್ದರು. ಅಲ್ಲಿ ಗೋವರ್ಧನ ಎಂಬ ದೊಡ್ಡ ಪರ್ವತವಿತ್ತು. ಗೋಕುಲದಲ್ಲಿ ಶ್ರೀಕೃಷ್ಣನೊಂದಿಗೆ ಎಲ್ಲಾ ಗೋಪ ಗೋಪಿಯರು ಆನಂದದಿಂದ ವಾಸಿಸುತ್ತಿದ್ದರು. ಪ್ರತಿವರ್ಷ ಮಳೆ ಬರಲಿ ಎಂದು ಎಲ್ಲಾರು ಇಂದ್ರದೇವನ ಪೂಜೆಯನ್ನು ಮಾಡುತ್ತಿದ್ದರು. ಒಂದು ಸಲ ಇಂದ್ರದೇವನಿಗೆ ನಾನು ಮಳೆ ಬರಿಸುವುದರಿಂದಲೇ ಎಲ್ಲ ನಡೆಯುತ್ತಿದೆ ಎಂದು ಗರ್ವವಾಯಿತು. ಇದು ಶ್ರೀಕೃಷ್ಣನಿಗೆ ತಿಳಿಯಿತು. ಯಾಕೆಂದರೆ ಪ್ರತಿಯೊಬ್ಬರ ಮನಸಲ್ಲಿ ಏನಿದೆ ಎಂದು ಶ್ರೀಕೃಷ್ಣನಿಗೆ ತಿಳಿಯುತ್ತದೆ. ಅದಕ್ಕೆ ಶ್ರೀಕೃಷ್ಣನು ಎಲ್ಲ ಗೋಪ ಗೋಪಿಯರಿಗೆ ಹೇಳಿದರು "ನಮಗೆ ಗೋವರ್ಧನ ಪರ್ವತದಿಂದ ಮಳೆ ಬರುತ್ತಿದೆ, ಅದಕ್ಕಾಗಿ ನಾವು ಇನ್ನು ಮುಂದೆ ಇಂದ್ರದೇವನ ಪೂಜೆ ಮಾಡುವುದು ಬೇಡ, ಗೋವರ್ಧನ ಪರ್ವತದ ಪೂಜೆ ಮಾಡೋಣ" ಎಂದು ಹೇಳಿದರು. ಆಗಿನಿಂದ ಎಲ್ಲರೂ ಗೋವರ್ಧನ ಪರ್ವತದ ಪೂಜೆ ಮಾಡಲು ಶುರು ಮಾಡಿದರು.
ಇದನ್ನು ನೋಡಿ ಇಂದ್ರನಿಗೆ ಕೋಪ ಬಂತು. ಆಗ ಇಂದ್ರನು ತುಂಬಾ ರಭಸವಾಗಿ ಮಳೆಯನ್ನು ಸುರಿಸಲು ಪ್ರಾರಂಭಿಸಿದನು. ಇದರಿಂದಾಗಿ ನದಿಯು ತುಂಬಿ ಹರಿಯಲಾರಂಭಿಸಿತು. ಎಲ್ಲಾ ಜನರು ಗಾಬರಿಯಿಂದ ಶ್ರೀಕೃಷ್ಣನ ಬಳಿಗೆ ಸಹಾಯ ಕೇಳಲು ಓಡಿದರು. ಆಗ ಶ್ರೀಕೃಷ್ಣನು " ಅರೇ, ನಾವು ಯಾವ ಪರ್ವತವನ್ನು ಪೂಜಿಸಿದ್ದೇವೆಯೋ ಅವರೇ ನಮ್ಮನ್ನು ಬಚಾವು ಮಾಡುವರು. ನಾವೆಲ್ಲರೂ ಸಂಘಟಿತರಾಗೋಣ" ಎಂದು ಹೇಳಿದರು. ಆಗ ಎಲ್ಲಾ ಗೋಪ ಗೋಪಿಯರು ತಮ್ಮ ತಮ್ಮ ಕೋಲುಗಳನ್ನು ಹಿಡಿದು ಒಂದು ಕಡೆ ಸೇರಿದರು. ಆಗ ಶ್ರೀಕೃಷ್ಣನು ಏನು ಮಾಡಿದರೆಂದು ತಿಳಿದಿದೆಯೇ? ಗೋವರ್ಧನ ಪರ್ವತವನ್ನು ತನ್ನ ಕಿರು ಬೆರಳಿನಿಂದ ಎತ್ತಿದರು. ಆಗ ದೊಡ್ಡ ಸದ್ದಾಯಿತು. ಆಗ ಎಲ್ಲಾ ಗೋಪ ಗೋಪಿಯರು ತಮ್ಮ ಕೋಲಿನಿಂದ ಪರ್ವತದ ಕೆಳಗೆ ಆಧಾರವಾಗಿ ಇಟ್ಟರು. ಪರ್ವತದ ಕೆಳಗೆ ಎಲ್ಲಾರಿಗೆ ಆಶ್ರಯ ದೊರಕಿತು. ಈಕಡೆ ಇಂದ್ರನ ಕಡೆ ಮೋಡ ಖಾಲಿಯಾಯಿತು.
ಈ ರೀತಿ ಶ್ರೀಕೃಷ್ಣನು ಭೀಕರ ಮಳೆಯಿಂದ ಎಲ್ಲರನ್ನು ರಕ್ಷಿಸಿದರು ಮತ್ತು ಎಲ್ಲರು ತಮ್ಮ ಕೋಲಿನಿಂದ ಸಹಾಯ ಮಾಡಲು ಹೋಗಿದ್ದರಿಂದ ಅವರ ಮೇಲೆ ಶ್ರೀ ಕೃಷ್ಣನು ಪ್ರಸನ್ನನಾದನು. ಈ ರೀತಿ ಸೇವೆ ಮಾಡಿದ್ದರಿಂದ ಅವರೆಲ್ಲರು ಮೋಕ್ಷಕ್ಕೆ ಹೋದರು.
ಮಕ್ಕಳೇ ಗರ್ವದಿಂದ ಏನಾಗುತ್ತದೆಂದು ನಿಮಗೆ ತಿಳಿಯಿತುತಾನೆ? ಶಾಲೆಯಲ್ಲಿ ನಾವು ಸ್ವಲ್ಪ ಚನ್ನಾಗಿ ಓದಿದರೂ ನಮಗೆ ಗರ್ವವಾಗುತ್ತದೆ. ಅದರಿಂದಾಗಿ ನಾವು ಇತರರನ್ನು ತುಚ್ಛವಾಗಿ ಕಾಣುತ್ತೇವೆ. ಆದರೆ ಈಶ್ವರನು ಪ್ರತಿ ಒಬ್ಬರಿಗೆ ಒಂದಲ್ಲಾ ಒಂದು ಗುಣವನ್ನು ಕೊಟ್ಟೇ ಇರುತ್ತಾನೆ. ಕೆಲವರು ಓದುವುದರಲ್ಲಿ ಹುಷಾರಿದ್ದರೆ, ಕೆಲವರು ಹಾಡುವುದರಲ್ಲಿ, ಕೆಲವರು ಚಿತ್ರಕಲೆಯಲ್ಲಿ ಹುಷಾರಿರುತ್ತಾರೆ. ಯಾರು ಎಲ್ಲಾರೊಂದಿಗೆ ಹೊಂದಿಕೊಂಡಿ ಇರುತ್ತಾರೆಯೋ ಅವರು ಎಲ್ಲಾರಿಗೆ ಸಹಾಯ ಮಾಡುತ್ತಾರೆ. ಅದರಿಂದಾಗಿ ನಾವು ಯಾರನ್ನೂ ತುಚ್ಛವಾಗಿ ಕಾಣಬಾರದು.

ಮಕ್ಕಳೇ ಇದರಿಂದ ನಾವು ಏನು ಪಾಠ ಕಲಿಯಬಹುದು? ದೇವರ ಭಕ್ತಿಯನ್ನು ಮಾಡುತ್ತಾ ದೇವರ ಕಾರ್ಯದಲ್ಲಿ ಸಹಾಯ ಮಾಡಬೇಕು. ಆಗ ನಮ್ಮ ಜನ್ಮ ಸಾರ್ಥಕವಾಗುತ್ತದೆ. ನಾವು ಕೂಡ ಮೋಕ್ಷಕ್ಕೆ ಹೋಗಬಹುದು.    

ಮಕ್ಕಳೇ,ನಾವು ಯಾಕೆ ನವರಾತ್ರಿಯನ್ನು ಆಚರಿಸುತ್ತೇವೆಂದು ತಿಳಿದಿದೆಯೇ?...


ಮಹಿಷಾಸುರ ಮರ್ದಿನಿ ದುರ್ಗಾದೇವಿ
ನವರಾತ್ರಿಯ ಮೊದಲನೆ ದಿನ ದುರ್ಗಾದೇವಿ ಅಥವಾ ಮಹಾಕಾಳಿಪ್ರತಿಷ್ಠಾಪನೆಯನ್ನು ಮಾಡುತ್ತಾರೆ ಮತ್ತು ಒಂಬತ್ತು ದಿವಸ ದೇವಿಯ ಉತ್ಸವವನ್ನು ಆಚರಿಸಲಾಗುತ್ತದೆ. ನಾವು ಇಂದು ದುರ್ಗಾದೇವಿಯು ಮಹಿಷಾಸುರ ಮರ್ದಿನಿ ಹೇಗೆ ಆದಳು ಎಂಬುದನ್ನು ತಿಳಿಯೋಣ.
ತುಂಬಾ ಹಿಂದೆ ಮಹಿಷಾಸುರ ಎಂಬ ರಾಕ್ಷಸನಿದ್ದ. ಅವನು ಜನರಿಗೆ ತುಂಬಾ ತೊಂದರೆ ನೀಡುತ್ತಿದ್ದನು. ಒಂದು ಸಲ ಅವನು ಇಂದ್ರನೊಂದಿಗೆ ಯುದ್ಧವನ್ನು ಮಾಡಿದನು ಮತ್ತು ಇಂದ್ರನನ್ನು ಸೋಲಿಸಿ ಅವನ ಸ್ಥಾನವನ್ನು ಪಡೆದನು. ಇಂದ್ರನನ್ನು ಸೋಲಿಸಿದಕ್ಕಾಗಿ ಅವನಿಗೆ ತನ್ನ ಶಕ್ತಯ ಬಗ್ಗೆ ತುಂಬಾ ಗರ್ವವಾಯಿತು. ಅವನು ಎಲ್ಲರೊಂದಿಗೆ ಕೆಟ್ಟದಾಗಿ ಮಾತನಾಡುತ್ತಿದ್ದನು. ದಿನೇ ದಿನೇ ಹೆಚ್ಚಾಗುತ್ತಿರುವ ಅವನ ಅನ್ಯಾಯವನ್ನು ಸಹಿಸಲಾರದೇ ದೇವತೆಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಿಗೆ ಪ್ರಾರ್ಥನೆಯನ್ನು ಮಾಡಿದರು ಮತ್ತು ಅವನಿಂದ ರಕ್ಷಣೆಯನ್ನು ನೀಡಬೇಕೆಂದು ಪ್ರಾರ್ಥಿಸಿದರು.
ಮೂರು ದೇವರು ಒಂದು ಕಡೆ ಸೇರಿ ತಮ್ಮ ತಮ್ಮ ಶಕ್ತಿಯನ್ನು ಸೇರಿಸಿ ದೇವಿಯೊಬ್ಬಳನ್ನು ನಿರ್ಮಾಣ ಮಾಡಿದರು. ಶಂಕರನ ಶಕ್ತಿಯಿಂದ ಮುಖ, ವಿಷ್ಣುವಿನ ಶಕ್ತಿಯಿಂದ ಕೈಗಳು ಮತ್ತು ಅಗ್ನಿಯ ಶಕ್ತಿಯಿಂದ ಮೂರು ಕಣ್ಣುಗಳು ನಿರ್ಮಾಣವಾದವು. ಈ ರೀತಿ ಪ್ರತಿಯೊಬ್ಬ ದೇವರು ಒಂದುಂದು ಅಂಗವನ್ನು ನೀಡಿ ಸಾಕ್ಷಾತ್ ದೇವಿಯ ನಿರ್ಮಾಣವಾಯಿತು. ಶಿವನು ತನ್ನ ತ್ರಿಶೂಲವನ್ನು, ವಿಷ್ಣು ಚಕ್ರವನ್ನು, ಇಂದ್ರನು ವಜ್ರವನ್ನು ಈ ರೀತಿ ಎಲ್ಲ ದೇವರು ದೇವಿಗೆ ಆಯುಧಗಳನ್ನು ನೀಡಿದರು.

ದೇವರ ತೇಜದಿಂದ ನಿರ್ಮಾಣವಾದ ದೇವಿಯು ಮಹಿಷಾಸುರನನ್ನು ವಧಿಸಲು ರೌದ್ರರೂಪವನ್ನು ತಾಳಿದರು. ಮಹಿಷಾಸುರ ಮತ್ತು ದೇವಿಗೆ ಒಂಬತ್ತು ದಿನಗಳ ಘೋರ ಯುದ್ಧವಾಯಿತು. ದುರ್ಗಾದೇವಿಯು ತನ್ನ ತ್ರಿಶೂಲದಿಂದ ಮಹಿಷಾಸುರನ್ನು ವಧಿಸಿದರು. ಮಹಿಷಾಸುರನನ್ನು ವಧಿಸಿದರಿಂದ ದೇವಿಗೆ ಮಹಿಷಾಸುರಮರ್ದಿನಿ ಎಂದು ಹೆಸರು ಬಂದಿತು. ಇದರ ನೆನಪಿಗಾಗಿ ನಾವು ನವರಾತ್ರಿಯನ್ನು ಆಚರಿಸುತ್ತೇವೆ.
ನಾವು ಯಾಕೆ ನವರಾತ್ರಿಯನ್ನು ಆಚರಿಸುತ್ತೇವೆಂದು ತಿಳಿಯಿತು ತಾನೆ? ಹಾಗಿದ್ದರೆ ಆ ದಿನಗಳಲ್ಲಿ ನಡೆಯುವ ಗರ್ಬಾ ನೃತ್ಯದ ಬಗ್ಗೆ ನಿಮಗೆ ಏನನಿಸುತ್ತದೆ? ದೊಡ್ಡ ದೊಡ್ಡ ಸ್ವರದಲ್ಲಿ ಹಾಡುಗಳನ್ನು ಹಾಕಿ ಅಂಗಗಳನ್ನು ಪ್ರದರ್ಶಿಸುವ ಬಟ್ಟೆಗಳನ್ನು ಹಾಕಿ ನಾಟ್ಯವನ್ನು ಮಾಡುವುದು ಎಷ್ಟು ಯೋಗ್ಯವಾಗಿದೆ? ಈ ವಿಷಯದಲ್ಲಿ ನೀವು ಜನರಿಗೆ ಅವರ ತಪ್ಪು ತಿಳಿಸಿ ಹೇಳಬಹುದು.  

ಮಕ್ಕಳೇ, ನಿಮಗೆ ಗಣಪತಿಯು ಸಿಂಧುರಾಸುರನನ್ನು ಕೊಂದ ಕಥೆ ಗೊತ್ತಾ??..

ಬಾಲ ಮಿತ್ರರೇ, ನಾವು ಇಂದು ನಮಗೆಲ್ಲರಿಗೆ ತುಂಬಾ ಪ್ರಿಯವಾಗಿರುವ ಗಣಪತಿಯ ಕಥೆಯನ್ನು ಕೇಳೋಣ. ಗಣಪತಿಯು ಸದಾ ನಮಗೆಲ್ಲರಿಗೆ ಆಶೀರ್ವಾದವನ್ನು ಮಾಡುತ್ತಾರೆ ಮತ್ತು ಗಣಪತಿಯ ಕರುಣಾಮಯ ದೃಷ್ಟಿಯನ್ನು ಅವರ ತಾರಕ ರೂಪವನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ನಾವಿಂದು ಗಣಪತಿಯು ಹೇಗೆ ತನ್ನ ಮಾರಕರೂಪದಿಂದ ರಾಕ್ಷಸರ ವಧೆಯನ್ನು ಮಾಡಿ ದೇವತೆಗಳನ್ನು ರಾಕ್ಷಸರ ತೊಂದರೆಯಿಂದ ಹೇಗೆ ಪಾರು ಮಾಡಿದರು ಎಂದು ನೋಡಣ.
ಸಿಂಧುರಾಸುರ ಎಂಬ ಒಬ್ಬ ರಾಕ್ಷಸನಿದ್ದನು. ಅವನು ತುಂಬಾ ಶಕ್ತಿಶಾಲಿಯಾಗಿದ್ದನು. ಅವನ ಬಳಿ ದೊಡ್ಡ ಸೈನ್ಯವಿತ್ತು. ಅವನು ದೇವತಗಳಿಗೆ ತೊಂದರೆ ನೀಡುತ್ತಿದ್ದನು. ಋಷಿಮುನಿಗಳ ಯಾಗಗಳಲ್ಲಿ ಅವನು ಯಾವಾಗಲು ಅಡಚಣೆಯನ್ನು ನೀಡುತ್ತಿದ್ದನು. ಇವನ ತೊಂದರೆಯಿಂದ ಬೇಸತ್ತ ದೇವತೆಗಳು ಮತ್ತು ಋಷಿಮುನಿಗಳು ಅವನನ್ನು ಸಾಯಿಸಬೇಕೆಂದು ವಿಚಾರ ಮಾಡಿದರು. ಆದರೆ ಇಷ್ಟು ದೊಡ್ಡ ರಾಕ್ಷಸನನ್ನು ಯಾರು ಸಾಯಿಸಬಹುದು ಎಂದು ಗೊತ್ತಾಗಲಿಲ್ಲ. ಆಗ ಪರಾಶರ ಋಷಿಯು ಗಣಪತಿಯ ಕಡೆ ಹೋದರು ಮತ್ತು ರಾಕ್ಷಸನನ್ನು ವಧಿಸಬೇಕೆಂದು ವಿನಂತಿಸಿದರು.
ಗಣಪತಿಯು ಇಲಿಯ ಮೇಲೆ ಆರೂಢರಾಗಿ ರಾಕ್ಷಸನನ್ನು ವಧಿಸಲು ತನ್ನ ಸೈನ್ಯದೊಂದಿಗೆ ಹೊರಟರು. ಗಣಪತಿಯು ತನ್ನ ಸೈನ್ಯದೊಂದಿಗೆ ಬರುತ್ತಿರುವುದನ್ನು ಸಿಂಧುರಾಸುರನ ಕಾವಲುಗಾರರು ನೋಡಿದರು. ತಕ್ಷಣ ಅವರು ಇದನ್ನು ಸಿಂಧುರಾಸುರನಿಗೆ ಹೇಳಿದರು. ನನ್ನೊಂದಿಗೆ ಯುದ್ಧಕ್ಕೆ ಬರಲು ಯಾರಿಗೆ ಧೈರ್ಯವಿದೆ ಎಂದು ಅವನಿಗೆ ತುಂಬಾ ಆಶ್ಚರ್ಯವಾಯಿತು. ಗಣಪತಿಯಂತ ಸಣ್ಣ ಹುಡುಗನು ನನ್ನೊಂದಿಗೆ ಯುದ್ಧಮಾಡುತ್ತನೆಂದು ತಿಳಿದು ಅವನಿಗೆ ನಗು ಬಂತು.
 ಇಷ್ಟರಲ್ಲೇ ಗಣಪತಿಯು ಅವನ ಮುಂದೆ ಬಂದು ನಿಂತರು. ಗಣಪತಿಯು ಅವನನ್ನು ಯುದ್ಧಕ್ಕೆ ಕರೆದರು. ರಾಕ್ಷಸನು ನೊಡನೋಡುತ್ತಿದ್ದಂತೆಯೇ ಅವನ ಮೂರುಪಟ್ಟು ದೊಡ್ಡದಾದ. ಗಣಪತಿಯು ಅವನನ್ನು ಎತ್ತಿ ಹೊಡೆಯಲು ಪ್ರಾರಂಭಿಸಿದರು. ರಾಕ್ಷಸನು ರಕ್ತಮಯವಾದ್ದನು. ಇದನ್ನು ನೋಡಿ ರಾಕ್ಷಸ ಸೈನಿಕರು ಅಲ್ಲಿಂದ ಹೆದರಿ ಓಡಿಹೋದರು. ರಾಕ್ಷಸನ ರಕ್ತದಿಂದ ಗಣಪತಿಯು ಕೆಂಪಾಗಿ ಕಾಣುತ್ತಿದ್ದರು. ಶಕ್ತಿಶಾಲಿ ರಾಕ್ಷಸನ ವಧೆಯನ್ನು ಬಾಲ ಗಣಪತಿಯು ಮಾಡಿದರೆಂದು ಎಲ್ಲಾ ದೇವತೆಗಳು ಅವನ್ನು ಸ್ತುತಿಸಿದರು ಮತ್ತು ಜಯಕಾರ ಹಾಕಿದರು.

ಮಕ್ಕಳೇ, ನಿಮಗೆ ಗಣಪತಿಯು ಅಂಗಲಾಸುರನನ್ನು ಕೊಂದ ಕಥೆ ಗೊತ್ತಾ??...

ಅಂಗಲಾಸುರ ಎಂಬ ಒಬ್ಬ ದುಷ್ಟ ರಾಕ್ಷಸನಿದ್ದನು. ಅಂಗಲಾಸುರನು ತನ್ನ ಬಾಯಿಂದ ಬೆಂಕಿಯನ್ನು ಎಸೆಯುತ್ತಿದ್ದರು. ಅವನ ಕಣ್ಣಿಗೆ ಕಂಡವರನ್ನೆಲ್ಲರನ್ನು ಸಾಯಿಸುತ್ತಿದ್ದನು. ಅವನ ಕಣ್ಣುಗಳಿಂದ ಬೆಂಕಿಯ ಜ್ವಾಲೆಗಳು ಬರುತ್ತಿದ್ದವು.  ಅವನು ಬಾಯಿಂದ ಹೊಗೆಯನ್ನು ಬಿಡುತ್ತಿದ್ದನು. ಜನರಿಗೆ ಇದರಿಂದ ತುಂಬಾ ಭಯವಾಗುತ್ತಿತ್ತು.
ಅಂಗಲಾಸುರನು ಈ ರೀತಿ ಅನೇಕ ಅರಣ್ಯಗಳನ್ನು ಸುಟ್ಟು ಹಾಕಿದ್ದನು. ಮನುಷ್ಯರು, ಪ್ರಾಣಿ ಪಕ್ಷಿಗಳನ್ನು ಸುಟ್ಟು ಬೂದಿ ಮಾಡಿದ್ದನು. ಗಣಪತಿಯು ಅನೇಕ ರಾಕ್ಷಸರನ್ನು ಸಾಯಿಸಿದ್ದಾನೆಂದು ಅವನಿಗೆ ತಿಳಿದಿತ್ತು. ಅವನು ಸೇಡು ತೀರಿಸಿಕೊಳ್ಳಬೇಕೆಂದು ಕಾಯುತ್ತಿದ್ದನು. ಗಣಪತಿಯನ್ನು ಸಾಯಿಸಬೇಕೆಂದು ಅವನು ಹುಡುಕುತ್ತದ್ದನು, ಆದರೆ ಗಣಪತಿಯು ಅವನಿಗೆ ಸಿಗಲಿಲ್ಲ.
ಒಂದು ದಿನ ಗಣಪತಿಯು ತನ್ನ ಚಿಕ್ಕರೂಪವನ್ನು ಬದಲಾಯಿಸಿ ಅಂಗಲಾಸುರನ ಮೂರುಪಟ್ಟು ದೊಡ್ಡವನಾದನು. ಅವನನ್ನು ನೋಡಿ ರಾಕ್ಷಸನು ಹೆದರಿದನು. ಆ ರಾಕ್ಷಸನ್ನು ಕೈಯಲ್ಲಿ ಎತ್ತಿ ಗಣಪತಿಯು ಅಡಕೆಯನ್ನು ತಿನ್ನುವಂತೆ ತಿಂದರು. ಇದರಿಂದಾಗಿ ಗಣಪತಿಯು ಬೆಂಕಿ ಬೆಂಕಿಯಾದರು. ಇದನ್ನು ಶಮನ ಮಾಡಲು ದೇವತೆಗಳು ಮತ್ತು ಋಷಿಮುನಿಗಳು ಅವನಿಗೆ ದೂರ್ವೆಯನ್ನು ಹಚ್ಚಿದರು. ದೂರ್ವೆಯಿಂದ ಬೆಂಕಿಯು ತಣ್ಣಗಾಯಿತು ಮತ್ತು ಗಣಪತಿಯು ಶಾಂತವಾಗಿದ್ದರು.
ಮುಂದೆ ಗಣಪತಿಯು ವಿಘ್ನಾಸುರ ರಾಕ್ಷಸನನ್ನು ಸಾಯಿಸಿದರು ಹಾಗಾಗಿ ಗಣಪತಿಗೆ ವಿಘ್ನೇಶ್ವರ ಎಂದು ಕರೆಯುತ್ತಾರೆ.
ಮಕ್ಕಳೇ ಗಣಪತಿಯು ವಿದ್ಯೆಯ ದೇವರಾಗಿದ್ದಾರೆ. ಓದುವ ಮೊದಲು ನಾವು ಗಣಪತಿಯನ್ನು ಪ್ರಾರ್ಥಿಸಿದರೆ ನಮಗೆ ವಿದ್ಯೆಯಲ್ಲಿ ಬರುವ ಅಡಚಣೆಗಳು ದೂರವಾಗುತ್ತದೆ

ಗಣಪತಿಯನ್ನು ಚಿಂತಾಮಣಿ ಎಂದು ಏಕೆ ಕರೆಯುತ್ತಾರೆ??....


ಗಣಪತಿ
ಬಾಲಮಿತ್ರರೇ, ಗಣಪತಿಯು ವಿದ್ಯಾದೇವತೆಯಾಗಿದ್ದಾರೆ. ಅವರು ನಮಗೆ ಒಳ್ಳೆಯ ಬುದ್ಧಿಯನ್ನು ನೀಡುತ್ತಾರೆ. ಎಲ್ಲಾ ವಿಘ್ನಗಳನ್ನು ದೂರ ಮಾಡುವುದರಿಂದ ಅವರಿಗೆ ವಿಘ್ನಹರ್ತನೆಂದು ಕರೆಯುತ್ತೇವೆ. ಗಣಪತಿಗೆ ಚಿಂತಾಮಣಿ ಎಂದೂ ಕರೆಯುತ್ತಾರೆ, ಅದು ಯಾಕೆಂದು ನಾವಿಂದು ತಿಳಿಯೋಣ.
 ಕಣ ಎಂಬ ಒಬ್ಬ ಕೆಟ್ಟ ರಾಜಕುಮಾರನಿದ್ದ. ಅವನು ದೀನ ದುರ್ಬಲರಿಗೆ ತೊಂದರೆ ನೀಡುತ್ತಿದ್ದ. ಋಷಿಮುನಿಗಳ ತಪಸ್ಸಿನಲ್ಲಿ ಅಡಚಣೆಯನ್ನು ನಿರ್ಮಾಣ ಮಾಡುತ್ತಿದ್ದ. ಒಂದು ಸಲ ಅವನು ತನ್ನ ಜೊತಗಾರರೊಂದಿಗೆ ಕಾಡಿನಲ್ಲಿ ಶಿಕಾರಿಗಾಗಿ ಹೋದನು. ಆ ಕಾಡಿನಲ್ಲಿ ಕಪಿಲ ಮುನಿಗಳ ಆಶ್ರಮವಿತ್ತು. ಕಪಿಲ ಮುನಿಗಳು ಕಣನನ್ನು ಸ್ವಾಗತಿಸಿದರು ಮತ್ತು ಅವರೆಲ್ಲರಿಗೆ ಊಟ ಮಾಡಲು ಆಮಂತ್ರಿಸಿದರು. ಕಪಿಲ ಮುನಿಗಳ ಕುಟೀರವನ್ನು ನೋಡಿ ಕಣನಿಗೆ ನಗು ಬಂತು. ಅವನು ಹೇಳಿದನು, "ನಿನ್ನಂತ ಬಡ ಸಾಧು ಇಷ್ಟು ಜನರಿಗೆ ಊಟ ಹಗೆ ಕೊಡಬಹುದು?" ಆಗ ಕಪಿಲ ಮುನಿಗಳು ತಮ್ಮ ಕೊರಳಿಗೆ ಹಾಕಿದ್ದ ಚಿಂತಾಮಣಿಯನ್ನು ತೆಗೆದು ಚಾಪೆಯ ಮೇಲೆ ಇಟ್ಟರು. ಆ ಮಣಿಗೆ ನಮಸ್ಕಾರವನ್ನು ಮಾಡಿ, ಪ್ರಾರ್ಥನೆಯನ್ನು ಮಾಡಿದರು. ಅದರಿಂದಾಗಿ ಒಂದು ಸುಂದರವಾದ ಭೋಜನಗೃಹ ನಿರ್ಮಾಣವಾಯಿತು. ಎಲ್ಲಾರು ಕೂರಲು ಚಂದನದ ಮಣೆ, ಮೇಜು ನಿರ್ಮಾಣವಾಗಿತ್ತು. ಬೆಳ್ಳಿಯ ತಟ್ಟೆಗಳಲ್ಲಿ ಅನೇಕ ವಿಧದ ಪಕ್ವಾನ್ನಗಳನ್ನು ಬಡಿಸಲಾಗಿತ್ತು. ಕಣ ಮತ್ತು ಅವನ ಜೊತೆಗಾರರು ಆ ರೀತಿಯ ಸ್ವರ್ಗದ ಭೋಜನವನ್ನು ತಿಂದು ಸಂತುಷ್ಟವಾದರು.
ಕಣನಿಗೆ ಆ ಮಣಿಯನ್ನು ಪಡೆಯಬೇಕೆಂದು ಆಸೆಯಾಯಿತು. ಅವನು ತನ್ನ ಇಚ್ಛೆಯನ್ನು ಕಪಿಲ ಮುನಿಗಳಿಗೆ ಹೇಳಿದನು. ಆದರೆ ಕಣನ ಸ್ವಭಾವ ತಿಳಿದಿದ್ದ ಕಪಿಲ ಮುನಿಗಳು ಅವನಿಗೆ ಮಣಿಯನ್ನು ನೀಡಲು ನಿರಾಕರಿಸಿದರು. ಅದಕ್ಕೆ ಕಣನು ಆ ಮಣಿಯನ್ನು ಮೋಸದಿಂದ ಕದ್ದನು.
ನಂತರ ಕಪಿಲಮುನಿಗಳು ಗಣಪತಿಯ ಆರಾಧನೆಯನ್ನು ಮಾಡಿದರು. ಕಪಿಲ ಮುನಿಗಳ ಭಕ್ತಿಗೆ ಗಣಪತಿಯು ಪ್ರಸನ್ನರಾಗಿ, ಕಣನಿಗೆ ತಕ್ಕ ಪಾಠ ಕಲಿಸಬೇಕೆಂದು ತೀರ್ಮಾನಿಸಿದರು. ಕಪಿಲ ಮುನಿಗಳು ತನ್ನ ಮೇಲೆ ಯುದ್ಧಕ್ಕೆ ಬರಬಹುದೆಂದು ತಿಳಿದು ಕಣನು ಯುದ್ಧ ಮಾಡಲು ತಯಾರಾಗಿದ್ದನು. ಗಣಪತಿಯ ಕೃಪೆಯಿಂದ ಅರಣ್ಯದಲ್ಲಿ ತುಂಬಾ ದೊಡ್ಡ ಸೈನ್ಯವು ನಿರ್ಮಾಣವಾಯಿತು. ಆಗ ಗಣಪತಿಯು ಸ್ವತಃ ರಣರಣಗಕ್ಕೆ ಆಗಮಿಸಿದರು. ಆಗ ಕಣನು ಗಣಪತಿಗೆ ತಕ್ಷಣ ಬಾಣಗಳ ಸುರಿಮಳೆಯನ್ನು ಸುರಿಸಲು ಪ್ರಾರಂಭಿಸಿದನು. ಆದರೆ ಗಣಪತಿಯು ತನ್ನ ಬಾಣಗಳಿಂದ ಅವುಗಳನ್ನು ಸೋಲಿಸಿದನು. ಆಗ ಗಣಪತಿಯು ತನ್ನ ಪಾಶವನ್ನು ಕಣನತ್ತ ಹಾಕಿದರು. ತಕ್ಷಣ ಕಣನು ಸತ್ತು ಬಿದ್ದನು. ಕಣನ ಅಪ್ಪ ಅಭಿಜಿತ ರಾಜನು ರಣರಂಕ್ಕೆ ಬಂದು ಗಣಪತಿಗೆ ನಮಸ್ಕಾರವನ್ನು ಮಾಡಿದರು. ಕಪಿಲ ಮುನಿಗಳ ಚಿಂತಾಮಣಿಯನ್ನು ಅವರಿಗೆ ಹಿಂತಿರುಗಿಸಿದರು. ನನ್ನ ಮಗನನ್ನು ಕ್ಷಮಿಸಿ ಅವನಿಗೆ ಸದ್ಗತಿಯನ್ನು ನೀಡಿ ಎಂದು ಗಣಪತಿಗೆ ಪ್ರಾರ್ಥನೆಯನ್ನು ಮಾಡಿದರು. ದಯಾಮಯಿಯಾದ ಗಣಪತಿಯು ಅವನ ವಿನಂತಿಯನ್ನು ಮನ್ನಿಸಿದರು.
ಗಣಪತಿಯು ಕಪಿಲ ಮುನಿಗಳ ಚಿಂತಾಮಣಿಯನ್ನು ಪುನಃ ಸಿಗುವಂತೆ ಮಾಡಿದ್ದರಿಂದ ಅವರಿಗೆ ಚಿಂತಾಮಣಿ ಎಂದು ಕರೆಯುತ್ತಾರೆ.
ಮಕ್ಕಳೇ, ಗಣಪತಿಯು ವಿದ್ಯಾದೇವತೆ ಎಂದು ತಿಳಿಯಿತಲ್ಲವೇ! ಹಾಗಾಗಿ ಅಬ್ಯಾಸಕ್ಕಾಗಿ ಕೂರುವ ಮುನ್ನ ಗಣಪತಿಗೆ ಪ್ರಾರ್ಥನೆಯನ್ನು ಮಾಡಿ, ’ಗಣೇಶಾಯ ನಮಃ’ ಎಂದು ನಾಮಜಪವನ್ನು ಮಾಡಿದರೆ, ಕಠಿಣ ವಿಷಯಗಳೂ ಸಹ ಸುಲಭ ಅನಿಸಿ ಅಭ್ಯಾಸ ಮಾಡಲು ಆನಂದ ಸಿಗುತ್ತದೆ. ಹಾಗಿದ್ದರೆ ಇಂದಿನಿಂದ ನಾಮಜಪ ಮಾಡಿಯೇ ಅಭ್ಯಾಸ ಪ್ರಾರಂಬಿಸುತ್ತೀರಲ್ಲವೇ!

ಪಂಢರಪುರದ ವಾರಕರಿ.....



ಪಂಢರಪುರದ ವಾರಕರಿ
ವಾರಕರಿ ಸಂಪ್ರದಾಯದಲ್ಲಿ ಆಚರಿಸಲಾಗುವ ವಾರಿಯು ಕೂಡ ಸಾಧನೆಯೇ ಆಗಿದೆ. ಇದು ಕರ್ಮಕಾಂಡದಲ್ಲಿ ಆಚರಿಸಲಾಗುವ ಸಾಧನೆಯಾಗಿದೆ. ವಾರಿಗೆ ಹೊಗುವವರು ತಮ್ಮ ದೇಹದ ಪರಿವೆ ಮಾಡದೇ ಮೈಲಿಗಟ್ಟಲೇ ನಡೆಯುತ್ತಾರೆ. ಹೀಗೆ ಮಾಡುವುದರಿಂದ ಶಾರೀರಿಕ ತಪಸ್ಸಾಚರಣೆಯಂತಾಗುತ್ತದೆ. ಇದು ಒಂದು ರೀತಿಯ ಹಠಯೋಗವಾಗುತ್ತದೆ. ಮಕ್ಕಳೇ ವಾರಕರಿಯು ಭಕ್ತಿಯೋಗಾನುಸಾರ ಮಾಡುವ ಸಾಧನೆಯೂ ಆಗಿದೆ. ವಾರಕರಿಯಲ್ಲಿ ನಾಮಜಪ, ಭಜನೆ, ಕೀರ್ತನೆಯ ಸಹಜ ಸುಂದರ ಸಂಯೋಗವು ಕಾಣಿಸುತ್ತದೆ.    

ಪಂಢರಾಪುರದಲ್ಲಿ ಪಾಂಡುರಂಗ ಮೂರ್ತಿಯ ಸ್ಥಾಪನೆ.....


ಪಂಢರಾಪುರದಲ್ಲಿ ಪಾಂಡುರಂಗ ಮೂರ್ತಿಯ ಸ್ಥಾಪನೆ
ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಸಾಮ್ರಾಜ್ಯಕ್ಕೆ ಪಾಂಡುರಂಗನ ಮೂರ್ತಿಯನ್ನು ತಂದರು ಮತ್ತು ತುಂಗಭದ್ರೆಯ ತೀರದಲ್ಲಿ ಸ್ಥಾಪಿಸಿದರು. ಏಕನಾಥ ಮಹಾರಾಜರ ಅಜ್ಜ ಭಾನುದಾಸ ಇವರು ಪಾಂಡುರಂಗನ ಭಕ್ತರಾಗಿದ್ದರು. ಅವರು ಆಧ್ಯಾತ್ಮದ ದೊಡ್ಡ ಅಧಿಕಾರಿಯಾಗಿದ್ದರು. ಅವರಿಗೆ ಪಾಂಡುರಂಗನು ಪ್ರಸನ್ನರಾಗಿ "ನಾನು ಕರ್ನಾಟಕದಲ್ಲಿ ಇದ್ದೀನಿ, ನೀನು ನನ್ನನ್ನು ಪಂಢರಪುರಕ್ಕೆ ಕರೆದುಕೊಂಡು ಹೋಗಿ ನನ್ನ ಸ್ಥಾಪನೆಯನ್ನು ಮಾಡು" ಎಂದು ಹೇಳಿದರು. ಹಾಗೆ ಭಾನುದಾಸನು ರಾಜನ ಬಳಿಗೆ ಹೋಗಿ ಮೂರ್ತಿಯನ್ನು ನೀಡಬೇಕೆಂದು ಬೇಡಿದನು. ರಾಜನಿಗೂ ಪಾಂಡುರಂಗನಿದ್ದ ದೃಷ್ಟಾಂತ ಸಿಕ್ಕಿತ್ತು. ಭಾನುದಾಸನ ಭಕ್ತಿಯನ್ನು ನೋಡಿ ಅವರಿಗೆ ಮೂರ್ತಿಯನ್ನು ನೀಡಿದರು. ಭಾನುದಾಸನು ಆ ಮೂರ್ತಿಯನ್ನು ಪಂಢರಪುರಕ್ಕೆ ಹೋಗಿ ಸ್ಥಾಪಿಸಿದರು.

ರಾಮಭಕ್ತ ಹನುಮಾನ.....

ಒಂದು ಸಲ ಸೀತಾದೇವಿಯು ತನ್ನ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುತ್ತಿದ್ದಳು. ಹನುಮಂತನು ಅದನ್ನು ನೋಡಿ ಸೀತಾಮಾತೆಗೆ ಕೇಳಿದನು, "ಸೀತಾಮಾತೆ, ನೀವು ಪ್ರತಿದಿನ ಹಣೆಗೆ ಕುಂಕುಮವನ್ನು ಯಾಕೆ ಹಚ್ಚಿಕೊಳ್ಳುತ್ತೀರಿ?" ಆಗ ಸೀತಾದೇವಿಯು ಹೇಳಿದರು, "ನಾನು ಕುಂಕುಮ ಯಾಕೆ ಹಚ್ಚುತ್ತೇನೆಂದರೆ, ಇದರಿಂದ ನಿನ್ನ ಸ್ವಾಮಿಯ ಅಂದರೆ ಶ್ರೀರಾಮನ ಆಯುಷ್ಯವು ಹೆಚ್ಚಾಗಲಿ ಎಂದು." ಇದನ್ನು ಕೇಳಿ ಹನುಮಂತನು ವಿಚಾರ ಮಾಡಿದನು, ಕೇವಲ ಹಣೆಗೆ ಕುಂಕುಮ ಹಚ್ಚುವುದರಿಂದ ಶ್ರೀರಾಮನ ಆಯುಷ್ಯ ಹೆಚ್ಚಾಗುವುದಿದ್ದರೆ, ನಾನು ಇಡೀ ದೇಹಕ್ಕೆ ಹಚ್ಚಿಕೊಳ್ಳುವೇನು ಎಂದು ತಕ್ಷಣ ಹನುಮಂತನು ಕುಂಕುಮವನ್ನು ತೆಗೆದುಕೊಂಡು ಇಡೀ ದೇಹಕ್ಕೆ ಹಚ್ಚಿಕೊಂಡರು. ಆಗಿನಿಂದ ಹನುಮಂತನು ಕೆಂಪು ಬಣ್ಣದವನಾದನು.
ಮಕ್ಕಳೇ, ಇದರಿಂದ ನಮಗೇನು ಕಲಿಯಲು ಸಿಕ್ಕಿತು? ಹನುಮಂತನು ಶ್ರೀರಾಮನ ಭಕ್ತನಾಗಿದ್ದನು. ಅವರಿಗೆ ರಾಮನ ಮೇಲೆ ತುಂಬಾ ಪ್ರೀತಿಯಿತ್ತು. ರಾಮನಿಗಾಗಿ ಏನಾದರೂ ಮಾಡಲು ಸಿದ್ಧರಾಗಿದ್ದರು. ಅದಕ್ಕಾಗಿಯೇ ಹನುಮಂತನು ಶ್ರೀರಾಮನ ದೊಡ್ಡ ಭಕ್ತರಾಗಿದ್ದರು. ನಾವು ಕೇವಲ ದೇವರ ಸೇವೆ ಮಾಡಲು ಮುಂದೆ ಬಂದರೆ ಸಾಕು ಆಗ ನಾವು ದೇವರ ಮುದ್ದಿನ ಮಕ್ಕಳಾಗುತ್ತೇವೆ.

ಮಕ್ಕಳೇ, ಸುಸಂಸ್ಕಾರಗಳ ನಿರ್ಮಿತಿಗೆ ನೀವೇನು ಮಾಡುವಿರಿ?

ಸಂಸ್ಕಾರವೆಂದರೆ ದೋಷವನ್ನು ತೊಲಗಿಸಿ ಒಳ್ಳೆಯ ಗುಣಗಳನ್ನು ವೃದ್ಧಿಸುವುದು. ಇವುಗಳ ಬಗ್ಗೆ ನಾವು ಇಂದು ತಿಳಿದುಕೊಳ್ಳುವವರಿದ್ದೇವೆ. ನಮ್ಮಲ್ಲಿನ ದುರ್ಗುಣಗಳನ್ನು ತೊಲಗಿಸಿ ಸದ್ಗುಣ ಸಂಪನ್ನವಾದ ಸುಸಂಸ್ಕಾರಗಳನ್ನು ವೃದ್ಧಿಸಲು ಯಾವ ಪ್ರಯತ್ನಗಳನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ. ನಾವು ‘ಸ್ವಭಾವದೋಷಗಳು ಹಾಗೂ ಅವುಗಳನ್ನು ಹೇಗೆ ತೆಗೆಯಬೇಕು’, ಎಂಬ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ತಿಳಿದುಕೊಳ್ಳೋಣ. (ಮುಂದುವರಿದ ಭಾಗ)
ಉ.ಸುಳ್ಳು ಮಾತನಾಡುವುದು: ಈ ದೋಷದಿಂದ ನಮಗೆ ಎಲ್ಲಕ್ಕಿಂತ ಹೆಚ್ಚು ನಷ್ಟವಾಗುತ್ತದೆ. ಇದಕ್ಕೆ ‘ಅಪ್ರಾಮಾಣಿಕತೆ’, ಎಂದೂ ಹೇಳುತ್ತಾರೆ. ಸುಳ್ಳು ಮಾತನಾಡು ವುದರಿಂದ ನಮಗೆ ಪಾಪ ತಗಲುತ್ತದೆ. ಸತ್ಯವಿದ್ದಲ್ಲಿ ಈಶ್ವರನಿರುತ್ತಾನೆ, ಹಾಗಾಗಿ ಸತ್ಯ ಮಾತನಾಡುವವರಿಗೆ ಈಶ್ವರನು ಯಾವಾಗಲೂ ಸಹಾಯ ಮಾಡುತ್ತಾನೆ.
ಊ.ಇತರರ ತಪ್ಪುಗಳನ್ನು ನೋಡುವುದು: ಇದರಿಂದ ನಮಗೆ ಇತರರ ಬಗ್ಗೆ ಸಿಟ್ಟು, ದ್ವೇಷ ನಿರ್ಮಾಣವಾ ಗುತ್ತದೆ. ತದ್ವಿರುದ್ಧ ಅವರಲ್ಲಿನ ಗುಣಗಳನ್ನು ನೋಡುವುದರಿಂದ ನಮಗೆ ಅವರ ಬಗ್ಗೆ ಪ್ರೀತಿ ನಿರ್ಮಾಣವಾಗುತ್ತದೆ. ಇತರರ ದೋಷವನ್ನು ನೋಡುವುದರಿಂದ ನಮಗೆ ಏನೂ ಲಾಭವಾಗುವುದಿಲ್ಲ. ಅದಕ್ಕಿಂತ ನಮ್ಮ ತಪ್ಪುಗಳ ಕಡೆಗೆ ಗಮನ ಕೊಟ್ಟರೆ ನಮ್ಮ ತಪ್ಪು ಮತ್ತು ದೋಷಗಳಿಂದ ಆಗುವ ಹಾನಿಯನ್ನು ತಡೆಯಬಹುದು. ಇದರಿಂದ ನಮ್ಮಲ್ಲಿ ಈಶ್ವರೀ ಗುಣಗಳನ್ನು ಹೆಚ್ಚಿಸ ಬಹುದು. ಕೆಳಗೆ ನೀಡಿದ ಕೆಲವು ದೋಷ ಗಳಲ್ಲಿ ನಿಮ್ಮಿಂದಲೂ ಇಂತಹ ತಪ್ಪುಗಳಾ ಗುತ್ತಿದ್ದರೆ ಅದನ್ನು ಹೇಗೆ ಬರೆಯಬೇಕು, ಎಂದು ತಿಳಿಸಲಾಗಿದೆ.
೧. ಬೆಳಗ್ಗೆ ತಡವಾಗಿ ಏಳುವುದು. ದೋಷ-ಆಲಸ್ಯ
೨. ತರಗತಿಯಲ್ಲಿ ಮಿತ್ರರೊಂದಿಗೆ ಜಗಳವಾಡುವುದು. ದೋಷ-ಜಗಳಗಂಟ
೩. ತಾಯಿಯು ‘ಅಂಗಡಿಯಿಂದ ಸಕ್ಕರೆ ಯನ್ನು ತಂದು ಕೊಡು’, ಎಂದು ಹೇಳಿದಾಗ ಅವಳ ಮಾತನ್ನು ಕೇಳಲಿಲ್ಲ. ದೋಷ- ಕೇಳುವ ವೃತ್ತಿಯಿಲ್ಲದಿರುವುದು
೪. ತರಗತಿಯಲ್ಲಿ ವಹಿಯನ್ನು ಮರೆತು ಬಂದೆನು.ದೋಷ-ಮರೆಗುಳಿತನ
೫. ಊಟದಲ್ಲಿ ಸೊಪ್ಪಿನಪಲ್ಯವನ್ನು ತಿನ್ನಲಿಲ್ಲ.ದೋಷ-ಇಷ್ಟಾನಿಷ್ಟ
೬. ಸ್ನಾನಗೃಹದಿಂದ ಹೊರಗೆ ಬರು ವಾಗ ದೀಪವನ್ನು ಆರಿಸಲಿಲ್ಲ. ದೋಷ- ಮರೆಗುಳಿತನ
೭. ಸ್ನಾನದ ಸಮಯದಲ್ಲಿ ನೀರನ್ನು ಹೆಚ್ಚು ಉಪಯೋಗಿಸಿದುದರಿಂದ ಅದನ್ನು ಅನಾವಶ್ಯಕವಾಗಿ ಕೆಳಗೆ ಚೆಲ್ಲಿದೆನು. ದೋಷ -ಮಿತವ್ಯಯದ ಅಭಾವ
೮. ಶಾಲೆಯಿಂದ ಬಂದ ನಂತರ ಸಮವಸ್ತ್ರವನ್ನು ಕೂಡಲೇ ತೆಗೆಯಲಿಲ್ಲ. ದೋಷ-ಮುಂದೂಡುವಿಕೆ
ಹೀಗೆ ಪ್ರತಿದಿನ ನಿಮ್ಮಿಂದ ನಡೆಯುವ ತಪ್ಪುಗಳನ್ನು ಬರೆದು ಅದರ ಹಿಂದಿನ ದೋಷಗಳನ್ನು ಹುಡುಕಿ ಬರೆಯಬೇಕು.
ದೋಷವನ್ನು ತೊಲಗಿಸುವ ಮೊದಲನೇ ಹಂತವೆಂದರೆ ತಪ್ಪುಗಳನ್ನು ಒಪ್ಪಿಕೊಳ್ಳುವುದು ಮತ್ತು ಎರಡನೇ ಹಂತವೆಂದರೆ ಆ ತಪ್ಪು ಗಳನ್ನು ನೋಂದಾಯಿಸಿಕೊಳ್ಳುವುದು. ಇದನ್ನು ನಾವು ನಿಯಮಿತವಾಗಿ ಮಾಡಬೇಕು. ಸದ್ಯ ನಾವು ನಮ್ಮಿಂದಾಗುವ ತಪ್ಪುಗಳನ್ನು ನೋಂದಾಯಿಸಿ, ನಂತರ ಅದು ಯಾವ ದೋಷದಿಂದ ಆಯಿತು, ಎಂದು ಬರೆಯಲು ಪ್ರಯತ್ನಿಸೋಣ.
ಕೃತಜ್ಞತೆ:‘ಹೇ ಶ್ರೀಕೃಷ್ಣಾ, ನಿನ್ನ ಕೃಪೆಯಿಂದ ನನಗೆ ನನ್ನೊಳಗಿನ ಸ್ವಭಾವ ದೋಷಗಳ ಅರಿವಾಗಿರುವುದರಿಂದ ನಾನು ನಿನ್ನ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ. ನನ್ನೊಳಗಿನ ಸ್ವಭಾವದೋಷಗಳನ್ನು ತೊಲ ಗಿಸಲು ನನ್ನಿಂದ ಏಕಾಗ್ರತೆಯಿಂದ ಪ್ರಯತ್ನ ಗಳು ಆಗಲಿ’.

ಮಕ್ಕಳೇ, ಸುಸಂಸ್ಕಾರಗಳ ನಿರ್ಮಿತಿಗೆ ನೀವೇನು ಮಾಡುವಿರಿ?

ಆ.ಉದ್ಧಟತನ, ಸಿಟ್ಟಿನಿಂದ ಮಾತ ನಾಡುವುದು: ಈ ದೋಷಗಳಿಂದ ದೂರದರ್ಶನದಲ್ಲಿನ ಕಾರ್ಯಕ್ರಮಗಳನ್ನು ನೋಡುತ್ತಿರುವಾಗ ತಾಯಿಯು ‘ಅಧ್ಯಯನ ಮಾಡಲು ಕುಳಿತುಕೊ’ ಎಂದು ಹೇಳಿದಾಗ, ನಾವು ಉದ್ಧಟತನ ಮತ್ತು ಸಿಟ್ಟಿನಿಂದ, ‘ಏನಿದು, ನಿನ್ನೆಯಷ್ಟೇ ನಾನು ತುಂಬ ಅಧ್ಯಯನ ಮಾಡಿದ್ದೇನೆ. ಈಗ ಸ್ವಲ್ಪ ಸಮಯ ನೋಡಿದರೆ ಏನಾಗುತ್ತದೆ?’ ಎಂದು ಹೇಳುತ್ತೇವೆ. ತಾಯಿಗೆ ನಾವು ಒಳ್ಳೆಯ ಅಂಕಗಳನ್ನು ಪಡೆದು ತೇರ್ಗಡೆ ಹೊಂದಬೇಕು, ಎಂದು ಅನಿಸುತ್ತದೆ. ನಾವು ಉದ್ಧಟತನದಿಂದ ಉತ್ತರ ಕೊಟ್ಟರೆ ನಮ್ಮ ಹಿತಕ್ಕಾಗಿ ಅವಳು ಸಿಟ್ಟಾಗಿ, ‘ದೂರದರ್ಶನ ವನ್ನು ನಿಲ್ಲಿಸು, ಇಲ್ಲದಿದ್ದರೆ, ತಂದೆಗೆ ಹೇಳುವೆನು. ಈಗ ಕೇಬಲ್ ಜೋಡಣೆ ಯನ್ನು ತೆಗೆದು ಹಾಕುತ್ತೇವೆ’, ಎಂದು ಹೇಳುವಳು. ‘ತಾಯಿಯು ನನ್ನ ಹಿತ ಕ್ಕಾಗಿಯೇ ಹೇಳುತ್ತಿದ್ದಾಳೆ’, ಎಂಬುದನ್ನು ನಾವು ಮರೆಯುತ್ತೇವೆ ಮತ್ತು ಇನ್ನೂ ಉದ್ಧಟತನದಿಂದ ಏನಾದರು ಹೇಳುತ್ತೇವೆ. ಅದರಿಂದ ವಾದವು ಇನ್ನೂ ಹೆಚ್ಚಾಗುತ್ತದೆ. ಪರಿಣಾಮವಾಗಿ ಇಬ್ಬರಿಗೂ ತೊಂದರೆ ಯಾಗುತ್ತದೆ ಮತ್ತು ಮನೆಯ ವಾತಾ ವರಣವು ಅಶಾಂತವಾಗುತ್ತದೆ. ನಮ್ಮಲ್ಲಿನ ಸಿಟ್ಟು ಮತ್ತು ಉದ್ಧಟತನದಿಂದ ಮಾತ ನಾಡುವ ದೋಷಗಳಿಂದ ಇದೆಲ್ಲವೂ ನಡೆ ಯುತ್ತದೆ. ಹಾಗಿದ್ದರೆ ನಾವು ಸಿಟ್ಟು ಮತ್ತು ಉದ್ಧಟತನದಿಂದ ಮಾತನಾಡಬೇಕೋ ಅಥವಾ ಆ ದೋಷಗಳನ್ನು ತೊಲಗಿಸ ಬೇಕೋ? ಅದಕ್ಕಾಗಿ ನಾವು ‘ನಮ್ರತೆ ಮತ್ತು ಪ್ರೀತಿಯಿಂದ ಮಾತನಾಡುವುದು’ ಈ ಗುಣವನ್ನು ಹೆಚ್ಚಿಸಲು ಪ್ರಯತ್ನ ಮಾಡ ಬೇಕು, ಉದಾ.ತಾಯಿಯು ‘ದೂರ ದರ್ಶನ ನೋಡದೇ ಈಗ ಅಧ್ಯಯನಕ್ಕೆ ಕುಳಿತುಕೊ’, ಎಂದು ಹೇಳಿದಾಗ ನಾವು ಅವರಿಗೆ ನಮ್ರತೆಯಿಂದ ಮತ್ತು ಪ್ರೀತಿ ಯಿಂದ ‘ಆಯಿತು, ನಾನು ದೂರದರ್ಶನ ವನ್ನು ೫ನಿಮಿಷ ನೋಡಿ ನಂತರ ಅದನ್ನು ನಿಲ್ಲಿಸಿ ಅಧ್ಯಯನಕ್ಕೆ ಕುಳಿತುಕೊಳ್ಳುತ್ತೇನೆ’, ಎಂದು ಹೇಳಬೇಕು. ಆಗ ತಾಯಿಗೂ ಒಳ್ಳೆಯದೆನಿಸುವುದು. ಒಂದು ವೇಳೆ ನಾವು ಇನ್ನೂ ೫ನಿಮಿಷ ದೂರದರ್ಶನ ನೋಡಿ ದರೂ ಅವರು ಏನೂ ಹೇಳಲಾರರು. ನಾವು ಮಾತ್ರ ತಾಯಿಗೆ ಆಶ್ವಾಸನೆ ಕೊಟ್ಟಂತೆ ೫ನಿಮಿಷದಲ್ಲಿ ದೂರದರ್ಶನ ನೋಡಿ ನಿಲ್ಲಿಸಿ ಅಧ್ಯಯನಕ್ಕೆ ಹೋಗಬೇಕು. ಇದರಿಂದ ತಾಯಿಗೆ ನಮ್ಮ ಮೇಲಿನ ವಿಶ್ವಾಸವೂ ಹೆಚ್ಚಾಗುವುದು. - ಕು. ಗಾಯತ್ರಿ ಬುಟ್ಟೆ, ಸನಾತನ ಆಶ್ರಮ, ರಾಮನಾಥಿ, ಗೋವಾ.  (ಮುಂದುವರಿಯುವುದು)

ಮಕ್ಕಳೇ, ಸುಸಂಸ್ಕಾರಗಳ ನಿರ್ಮಿತಿಗೆ ನೀವೇನು ಮಾಡುವಿರಿ?

ಸಂಸ್ಕಾರವೆಂದರೆ ದೋಷವನ್ನು ತೊಲಗಿಸಿ ಒಳ್ಳೆಯ ಗುಣಗಳನ್ನು ವೃದ್ಧಿಸುವುದು. ಇವುಗಳ ಬಗ್ಗೆ ನಾವು ಇಂದು ತಿಳಿದುಕೊಳ್ಳುವವರಿದ್ದೇವೆ. ನಮ್ಮಲ್ಲಿನ ದುರ್ಗುಣಗಳನ್ನು ತೊಲಗಿಸಿ ಸದ್ಗುಣಸಂಪನ್ನವಾದ ಸುಸಂಸ್ಕಾರಗಳನ್ನು ವೃದ್ಧಿಸಲು ಯಾವ ಪ್ರಯತ್ನಗಳನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ. ನಾವು ಈ ಸಂಚಿಕೆಯಲ್ಲಿ ‘ಸ್ವಭಾವ ದೋಷಗಳನ್ನು ಹೇಗೆ ತೆಗೆಯಬೇಕು’, ಎಂಬ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ತಿಳಿದುಕೊಳ್ಳೋಣ. (ಮುಂದುವರಿದ ಭಾಗ)
ಆ.ಅವ್ಯವಸ್ಥಿತತನ: ಈ ದೋಷ ದಿಂದ ವಸ್ತುಗಳನ್ನು ವ್ಯವಸ್ಥಿತ ಮತ್ತು ಅದೇ ಸ್ಥಳದಲ್ಲಿ ಇಡುವುದಿಲ್ಲ. ಇದರಿಂದ ಶಾಲೆಯ ಪುಸ್ತಕಗಳು, ವಹಿಗಳು, ಲೇಖನಿ, ಟವೆಲು, ಗಡಿಯಾರ ಇತ್ಯಾದಿ ವಸ್ತುಗಳು ಕಳೆದು ಹೋಗುತ್ತವೆ. ನಂತರ ನಮಗೆ ಸಿಟ್ಟು ಬರುತ್ತದೆ. ಆ ವಸ್ತುಗಳನ್ನು ಹುಡು ಕಲು ಸಮಯ ಹೋಗುತ್ತದೆ. ಅಪ್ಪ-ಅಮ್ಮ  ವಸ್ತುಗಳನ್ನು ಕಳೆದುಕೊಂಡಿದ್ದಕ್ಕೆ ನಮ್ಮ ಮೇಲೆ ಕೋಪಗೊಳ್ಳುತ್ತಾರೆ. ಇವೆಲ್ಲ ‘ಅವ್ಯವಸ್ಥಿತತೆ’ ಎಂಬ ದೋಷದಿಂದ ಆಗುತ್ತದೆ. ಹಾಗಾದರೆ ಆ ದೋಷವನ್ನು ನಾವು ತೊಲಗಿಸಬೇಕೋ ಬೇಡವೋ? ಈ ದೋಷಗಳನ್ನು ತೊಲಗಿಸಲು ನಾವು ತೆಗೆದ ವಸ್ತ್ತುಗಳನ್ನು ಪುನಃ ಅದೇ ಸ್ಥಳದಲ್ಲಿ ಇಡಬೇಕು ಮತ್ತು ‘ವ್ಯವಸ್ಥಿತತೆ’ ಎಂಬ ಗುಣಗಳನ್ನು ಹೆಚ್ಚಿಸಬೇಕು.

ಮಕ್ಕಳೇ, ಸುಸಂಸ್ಕಾರಗಳ ನಿರ್ಮಿತಿಗೆ ನೀವೇನು ಮಾಡುವಿರಿ

ಹಂತ ೨: ಎರಡನೇ ಹಂತವೆಂದರೆ ದಿನವಿಡೀ ತನ್ನಿಂದ ನಡೆದ ತಪ್ಪುಗಳ ನೋಂದಣಿ ಮಾಡಿಡುವುದು ಮತ್ತು ಆ ತಪ್ಪುಗಳ ಹಿಂದಿನ ಸ್ವಭಾವದೋಷವನ್ನು ಬರೆಯುವುದು. ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಹಾನಿಕರವಾದ ಕೆಲವು ದೋಷಗಳನ್ನು ನಾವು ನೋಡೋಣ. ಈ ದೋಷಗಳ ಬಗ್ಗೆ ನಡೆಯುವ ಪ್ರಸಂಗ ಅಥವಾ ಆ ಸಂದರ್ಭದಲ್ಲಿ ಆಗುವ ತಪ್ಪುಗಳನ್ನು ನೀವು ಹೇಳಬೇಕು. ದೋಷಗಳನ್ನು ತೊಲಗಿಸಲು ನಮ್ಮಲ್ಲಿ ಗುಣಗಳನ್ನು ಹೆಚ್ಚಿಸಬೇಕಾಗಿದೆ. ಇದನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.
ಅ.ಆಲಸ್ಯ: ಈಗ ನಾವು ‘ಆಲಸ್ಯ’ ಎಂಬ ದೋಷದ ಬಗ್ಗೆ ನೋಡೋಣ. ಆಲಸ್ಯ ದೋಷದಿಂದ ನಮ್ಮಿಂದ ಯಾವ ಯಾವ ತಪ್ಪುಗಳಾಗು ತ್ತವೆ ಎಂದು ಯಾರಾದರೂ ಹೇಳಬಹುದೇನು? ಬೆಳಗ್ಗೆ ತಡವಾಗಿ ಏಳು ವುದು, ಅಧ್ಯಯನ ಮಾಡದಿರುವುದು ಈ ತಪ್ಪುಗಳಿಂದ ನಮಗೆ ಲಾಭ ವಾಗುತ್ತದೆಯೋ ಅಥವಾ ಹಾನಿಯಾಗುತ್ತದೆಯೋ? ಬೆಳಗ್ಗೆ ತಡವಾಗಿ ಏಳುವುದರಿಂದ ಮುಂದಿನ ಕೆಲಸ ಮಾಡಲು ತಡವಾಗುತ್ತದೆ. ಶಾಲೆ ಹೋಗಲು ತಡವಾಗುತ್ತಿರುವುದರಿಂದ ನಮಗೆ ಕಿರಿಕಿರಿಯಾಗುತ್ತದೆ. ಈಗ ಈ ದೋಷ ತೊಲಗಿಸಲು ನಮಗೆ ಯಾವ ಗುಣವನ್ನು ಹೆಚ್ಚಿಸಬೇಕು? ‘ತತ್ಪರತೆ’ ‘ನಾನು ಬೆಳಗ್ಗೆ ತತ್ಪರತೆಯಿಂದ ಏಳುವೆನು, ಅಧ್ಯಯನಕ್ಕೆ ತತ್ಪರತೆ ಯಿಂದ ಕುಳಿತು ಕೊಳ್ಳುವೆನು’, ಎಂದು ಮನಸ್ಸಿಗೆ ಹೇಳಬೇಕು. ಈಶ್ವರೀ ರಾಜ್ಯದಲ್ಲಿ (ರಾಮರಾಜ್ಯದಲ್ಲಿ) ಆಂಗ್ಲವಲ್ಲ, ಪ್ರಾದೇಶಿಕ ಭಾಷೆಯಲ್ಲಿ ಕಾರುಬಾರು ನಡೆಯಲಿರುವುದರಿಂದ ಆಡಳಿತವರ್ಗದಲ್ಲಿರುವ ಐಎಎಸ್ ಅಧಿಕಾರಿಗಳೇ,
ಆದಷ್ಟು ಬೇಗನೇ ಪ್ರಾದೇಶಿಕ ಭಾಷೆಯನ್ನು ಕಲಿತುಕೊಳ್ಳಿರಿ!
‘ಪ್ರಸ್ತುತ ಕಾಲದಲ್ಲಿ ಭಾಷಾಭಿಮಾನಶೂನ್ಯ ರಾಜಕಾರಣಿಗಳಿಂದಾಗಿ ಭಾರತದ ಆಡಳಿತದ ಕಾರುಬಾರುಗಳೆಲ್ಲ ಆಂಗ್ಲ ಭಾಷೆಯಲ್ಲಿ ನಡೆಯು ತ್ತಿದೆ. ‘ಭಾಷಾಭಿಮಾನಶೂನ್ಯ ದೇಶವು ರಸಾತಳಕ್ಕೆ ಹೋಗುತ್ತದೆ’, ಎಂಬ ಸಿದ್ಧಾಂತಕ್ಕನುಸಾರ ಭಾರತವು ಇಂದು ಎಲ್ಲ ಕ್ಷೇತ್ರಗಳಲ್ಲಿ ಅವನತಿ ಹೊಂದುತ್ತಿದೆ. ಆದುದರಿಂದ ಕೆಲವು ವರ್ಷಗಳಲ್ಲಿ ಬರಲಿರುವ ಈಶ್ವರೀ ರಾಜ್ಯದಲ್ಲಿ (ರಾಮರಾಜ್ಯದಲ್ಲಿ) ದೇಶದ ಪ್ರಾದೇಶಿಕ ಕಾರುಬಾರು ಪ್ರಾದೇಶಿಕ ಭಾಷೆಯಲ್ಲಿ ಮತ್ತು ರಾಷ್ಟ್ರೀಯ ಕಾರುಬಾರು ರಾಷ್ಟ್ರಭಾಷೆ ಯಲ್ಲಿ ನಡೆಯುವುದು. ಅದಕ್ಕಾಗಿ ಸದ್ಯ ಆಡಳಿತದ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿಗಳೇ, ಆದಷ್ಟು ಬೇಗನೇ ಪ್ರಾದೇಶಿಕ ಭಾಷೆಯನ್ನು ಕಲಿತುಕೊಳ್ಳಿರಿ. ಇಲ್ಲದಿದ್ದರೆ ಪ್ರಾದೇಶಿಕ ಭಾಷೆ ಬರುವುದಿಲ್ಲವೆಂದು ಈಶ್ವರೀರಾಜ್ಯದಲ್ಲಿ ನೀವು ನೌಕರಿ ಕಳೆದುಕೊಳ್ಳ ಬೇಕಾಗಬಹುದು!"

ಮಕ್ಕಳೇ, ಸುಸಂಸ್ಕಾರಗಳ ನಿರ್ಮಿತಿಗೆ ನೀವೇನು ಮಾಡುವಿರಿ

ಸಂಸ್ಕಾರವೆಂದರೆ ದೋಷವನ್ನು ತೊಲಗಿಸಿ ಒಳ್ಳೆಯ ಗುಣಗಳನ್ನು ವೃದ್ಧಿಸುವುದು. ಇವುಗಳ ಬಗ್ಗೆ ನಾವು ಇಂದು ತಿಳಿದುಕೊಳ್ಳುವವರಿದ್ದೇವೆ. ನಮ್ಮಲ್ಲಿನ ದುರ್ಗುಣಗಳನ್ನು ತೊಲಗಿಸಿ ಸದ್ಗುಣಸಂಪನ್ನಾರಿ ಸುಸಂಸ್ಕಾರ ಗಳನ್ನು ವೃದ್ಧಿಸಲು ಯಾವ ಪ್ರಯತ್ನಗಳನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ. ನಾವು ಈ ಸಂಚಿಕೆಯಲ್ಲಿ ‘ಸ್ವಭಾವದೋಷವನ್ನು ಹೇಗೆ ತೆಗೆಯಬೇಕು’, ಎಂಬ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ತಿಳಿದುಕೊಳ್ಳೋಣ.
ಪ್ರಾರ್ಥನೆ: ‘ಹೇ, ಶ್ರೀಕೃಷ್ಣಾ, ನನಗೆ ನನ್ನಲ್ಲಿನ ಸ್ವಭಾವದೋಷದ ಅರಿವಾಗಲಿ ಹಾಗೂ ಅವುಗಳನ್ನು ನಾಶ ಮಾಡಲು ನನಗೆ ಇಂದಿನ ವಿಷಯ ದಿಂದ ಯೋಗ್ಯ ದಿಶೆ ಸಿಗಲಿ, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ’!
ಹಂತ೧:ಎಷ್ಟು ಜನರಿಗೆ ‘ನನ್ನಲ್ಲಿ ದೋಷವೇ ಇಲ್ಲ’ ಎಂದೆನಿಸುತ್ತದೆ, ನಮ್ಮ ಶಾಲೆಯಲ್ಲಿ, ನೆರೆಹೊರೆಯಲ್ಲಿ, ಅಕ್ಕಪಕ್ಕದವರಲ್ಲಿ ಒಂದೂ ದೋಷ ವಿಲ್ಲದವರು ಯಾರಾದರೂ ಇದ್ದಾರೇನು? ಯಾರೂ ಇಲ್ಲ. ಕೇವಲ ಈಶ್ವರನಲ್ಲಿ ಮಾತ್ರ ಯಾವುದೇ ದೋಷವಿಲ್ಲ, ಏಕೆಂದರೆ ಅವನು ಸರ್ವಗುಣ ಸಂಪನ್ನನಾಗಿದ್ದಾನೆ. ಪ್ರತಿಯೊಬ್ಬರಲ್ಲಿ ಒಂದಲ್ಲವೊಂದು ದೋಷ ಇದ್ದೇ ಇರುತ್ತದೆ. ‘ನನ್ನಲ್ಲಿ ದೋಷವೇ ಇಲ್ಲ’ ಅಥವಾ ‘ನಾನು ತಪ್ಪನ್ನೇ ಮಾಡುವುದಿಲ್ಲ’, ಹೀಗೆ ಹೇಳಿದರೆ ನಮ್ಮೊಳಗಿನ ದೋಷಗಳು ಹಾಗೆಯೇ ಉಳಿಯುತ್ತವೆ. ಅದರಿಂದ ನಮಗೆ ಹಾನಿಯಾಗುತ್ತದೆ, ಆದುದರಿಂದ ತಪ್ಪನ್ನು ಒಪ್ಪಿಕೊಳ್ಳುವುದು ಮತ್ತು ಅದು ತನಗೆ ಒಪ್ಪಿಗೆಯಾಗುವುದು ದೋಷ ನಿರ್ಮೂಲನೆಯ ಮೊದಲನೇ ಹಂತವಾಗಿದೆ.

ದೂರದರ್ಶನದ ದುಷ್ಪರಿಣಾಮ ಮತ್ತು ದೂರದರ್ಶನವನ್ನು ಹೇಗೆ ದೂರವಿಡುವಿರಿ?

‘ರಾಮಾಯಣ, ಮಹಾಭಾರತ, ಛತ್ರಪತಿ ಶಿವಾಜಿ ಮಹಾರಾಜರ ದಾರಾವಾಹಿ ಹಾಗೂ ಸಂತ ತುಕಾರಾಮ ಮಹಾರಾಜರ, ಸಂತಜ್ಞಾನೇಶ್ವರ ಮುಂತಾದ ಸಂತರ ಜೀವನ ಚರಿತ್ರೆಯನ್ನು ಆಧರಿತ ಚಲನಚಿತ್ರ ಅಥವಾ ದಾರಾವಾಹಿಯೊಂದಿಗೆ ನಮ್ಮ ಜ್ಞಾನವೃದ್ಧಿಗೊಳಿಸುವಂತಹ ಮತ್ತು ರಾಷ್ಟ್ರ ಹಾಗೂ ಧರ್ಮ ಪ್ರೇಮವನ್ನು ಜಾಗೃತಗೊಳಿಸುವ ಕಾರ್ಯಕ್ರಮ (ಉದಾ. ಡಿಸ್ಕವರಿ, ನ್ಯಾಸನಲ್ ಜಿಆಗ್ರಾಫಿ ಚಾನೆಲ್, ಸಂಸ್ಕಾರ ವಾಹಿನಿ ಚಾನೆಲ್) ನಿಯಮಿತ ಸಮಯದಲ್ಲಿ ನೋಡ ಬೇಕು.’- ಶ್ರೀ. ಪ್ರಸಾದ ಮೈಸಕರ, ರತ್ನಗಿರಿ. ಮಕ್ಕಳಲ್ಲಿ ‘ಕಾರ್ಟೂನ್’ ನೋಡುವ ಬದಲು ಪಂಚತಂತ್ರದಲ್ಲಿನ ಬೋಧಯುಕ್ತ ವಿಷಯಗಳನ್ನು ಓದುವ ಅಭ್ಯಾಸ ನಿರ್ಮಾಣ ಮಾಡಿರಿ ! 
ಇತ್ತೀಚೆಗಿನ ಮಕ್ಕಳು ಗಂಟೆಗಟ್ಟಲೆ ಪಾಶ್ಚಾತ್ಯರು ನಿರ್ಮಿಸಿದ ‘ಟಾಮ್ ಎಂಡ್ ಜೆರಿ’ಯಂತಹ ನಿರರ್ಥಕ ಹಾಗೂ ಕೇವಲ ಮನೋರಂಜನೆಗಾಗಿರುವ ಲಘುಚಲನಚಿತ್ರವನ್ನು ನೋಡುತ್ತಾ ಕುಳಿತಿರುತ್ತಾರೆ. ಈ ಲಘುಚಲನಚಿತ್ರದಲ್ಲಿ ಕೇವಲ ಹೊಡೆದಾಟವನ್ನೇ ತೋರಿಸಲಾಗುವುದರಿಂದ ಅದರಿಂದ ಯಾವುದೇ ಬೋಧನೆ ದೊರೆಯುವುದಿಲ್ಲ. ಅದಕ್ಕಿಂತ ಮಕ್ಕಳು ಪಂಚತಂತ್ರದಲ್ಲಿನ ವಿಷಯಗಳನ್ನು ಓದಿದರೆ. ಅದರಿಂದ ಅವರಿಗೆ ನೀತಿಶಾಸ್ತ್ರ ಹಾಗೂ ವ್ಯವಹಾರವನ್ನು ಯಶಸ್ವಿಯಾಗಿ ಮಾಡುವ ವಿಷಯದ ಜ್ಞಾನ ಸಿಗುವುದು. ಪಂಚತಂತ್ರದಲ್ಲಿನ ವಿಷಯಗಳಿಂದ ಸಂಸ್‌ಕೃತ ನೀತಿವಾಕ್ಯಗಳು ಸಹ ಕಲಿಸಲಾಗಿದೆ. ಪ್ರಾಚೀನ ಪಾಶ್ಚಾತ್ಯ ಕಥೆನಿರ್ಮಾಪಕರಿಗೆ ಪಂಚತಂತ್ರಗಳಿಂದಲೇ ಪ್ರೇರಣೆ ಸಿಕ್ಕಿತು. 


ದೂರದರ್ಶನದ ದುಷ್ಪರಿಣಾಮ ಮತ್ತು ದೂರದರ್ಶನವನ್ನು ಹೇಗೆ ದೂರವಿಡುವಿರಿ?

ದಾರಾವಾಹಿಗಳಲ್ಲಿ ಹಾಗೂ ಚಲನಚಿತ್ರಗಳಲ್ಲಿ ವಿರುದ್ಧ ಮಾತನಾಡುವುದು, ಕದಿಯುವುದು, ಹೊಡೆದಾಟ, ಬಲತ್ಕಾರ, ಕೊಲೆ ಮುಂತಾದ ಅನೇಕ ಅನೈತಿಕತೆಯ ವಿಷಯಗಳಿರುತ್ತವೆ. ಆದುದರಿಂದ ಮಕ್ಕಳಿಗೆ ಅದೇ ಅಭ್ಯಾಸವಾಗುತ್ತದೆ. ಇನ್ನು ಭೂತಗಳ (ಮಾಲಿಕೆ) ದಾರಾವಾಹಿಗಳನ್ನು ನೋಡಿ ಮಕ್ಕಳು ಹೆದರುತ್ತಾರೆ ಹಾಗೂ ರಾತ್ರಿ ಕೆಟ್ಟ ಕನಸು ಬೀಳುವುದರಿಂದ ನಿದ್ರೆಯಿಂದ ಬೆದರಿಕೊಂಡು, ಕಿರುಚುತ್ತಾ ಅಥವಾ ಅಳುತ್ತಾ ಏಳುತ್ತಾರೆ. ಪರೀಕೆ ಹತ್ತಿರ ಬಂದರು ಸಹ ಮಕ್ಕಳಿಗೆ ದೂರದರ್ಶನದಲ್ಲಿನ ಕಾರ್ಯಕ್ರಮವನ್ನು ನೋಡುವ ಮೋಹವು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಇಂತಹ ಮಕ್ಕಳಿಂದ ಅಪೇಕೆಯಂತೆ ಅಭ್ಯಾಸವಾಗದಿರುವುದರಿಂದ ಅವರ ಮುಂದಿನ ಜೀವನದ ಮೇಲೆ ವಿಪರೀತ ಪರಿಣಾಮವಾಗುವುದು. 
ಈಗ ನೀವೇ ಹೇಳಿ, ಈ ದೂರದರ್ಶನವು, ಅಂದರೆ ‘ಟಿ.ವಿ.’ ನಮ್ಮ ಮನೆಯಲ್ಲಿನ ರಾಕ್ಷಸ ಹೌದೋ ಅಲ್ಲವೋ? ಈಗ ಆ ಕಾರ್ಯಕ್ರಮ ನೋಡುವುದರಿಂದಾಗುವ ಹಾನಿಯೇನೆಂಬುದು ನಿಮ್ಮ ಗಮನಕ್ಕೆ ಬಂದಿರ ಬಹುದು. ಹಾಗಾದರೆ ಯಾವುದನ್ನು ದೂರವಿಡ ಬೇಕೋ, ಅದು ‘ದೂರ...ದರ್ಶನ’, ಎಂಬ ಸಮೀಕರಣವನ್ನೇ ಮಾಡ ಬೇಕಾಗುತ್ತದೆ. ಆದುದರಿಂದ ಎಲ್ಲ ಬಾಂಧವರಿಗೆ ನಮ್ಮ ವಿನಂತಿಯೇನೆಂದರೆ, ದೂರದರ್ಶನವನ್ನು ದೂರವೇ ಇಡಿರಿ. ಪರೀಕೆಯ ಸಂದರ್ಭದಲ್ಲಿಯಾದರೂ ದೂರದರ್ಶನವನ್ನು ತೆಗೆದು ತಮ್ಮ ಅಮೂಲ್ಯವಾದ ಸಮಯವನ್ನು ಸತ್ಕಾರ್ಯಕ್ಕೆ ಉಪಯೋಗಿಸಿರಿ. 
ಇಷ್ಟರ ತನಕ ನಮಗೆ ಹೆಚ್ಚು ಸಮಯ ದೂರಧರ್ಶನ ನೋಡುವ ಅಭ್ಯಾಸವಿದ್ದರೆ, ಅದನ್ನು ಹಂತ-ಹಂತವಾಗಿ ಕಡಿಮೆಗೊಳಿಸುವ ಪ್ರಯತ್ನ ಮಾಡ ಬೇಕು. ಅದಕ್ಕಾಗಿ ಪ್ರಥಮ ರಜೆಯ ದಿನದಲ್ಲಿ ಒಂದು ಗಂಟೆಯಷ್ಟು ಸಮಯ ಕಾರ್ಯಕ್ರಮ ನೋಡ ಬೇಕು ಹಾಗೂ ಪರೀಕೆ ಹತ್ತಿರ ಬರುವಾಗ ದೂರದರ್ಶನ ನೋಡುವುದನ್ನು ಸಂಪೂರ್ಣ ನಲ್ಲಿಸ ಬೇಕು.

ದೂರದರ್ಶನದ ದುಷ್ಪರಿಣಾಮ ಮತ್ತು ದೂರದರ್ಶನವನ್ನು ಹೇಗೆ ದೂರವಿಡುವಿರಿ?

ನಮ್ಮಲ್ಲಿ ಸುಸಂಸ್ಕಾರ ನಿರ್ಮಾಣವಾಗುವಂತಹ ಕಾರ್ಯಕ್ರಮ, ಉದಾ. ಸಂತರ, ಕ್ರಾಂತಿಕಾರರ ಮತ್ತು ಸಮಾಜಪ್ರಭೋಧನೆ ಮಾಡುವಂತಹ ಚಲನಚಿತ್ರಗಳನ್ನು ದೂರದರ್ಶನದಲ್ಲಿ ಅಗತ್ಯವಾಗಿ ನೋಡ ಬೇಕು, ಆದರೆ ದುರ್ದೈವದಿಂದ ಇಂತಹ ಕಾರ್ಯಕ್ರಮಗಳನ್ನು ಬಹಳ ಕಡಿಮೆ ಮಕ್ಕಳು ನೋಡುತ್ತಾರೆ. ಮಕ್ಕಳು ‘ಕ್ಯೌಂಕಿ ಸಾಸ್ ಭೀ ಕಭಿ ಬಹು ಥಿ’ ಇಂತಹ ಕೌಟುಂಬಿಕ ಮಾಲಿಕೆಯನ್ನು ನೋಡುತ್ತಾರೆ, ಅದರಲ್ಲಿನ ಪಾತ್ರದಾರಿಗಳು ರಾಗ-ದ್ವೇಷದಿಂದ ಜಗಳ ಮಾಡುತ್ತಾರೆ. ಈ ಮಾಲಿಕೆಯಲ್ಲಿ ಅಳುವಂತಹ ದೃಶ್ಯಗಳಿಗ್ಕೆ ಪರ್ಯಾಯವಿರುವುದಿಲ್ಲ. ಮಕ್ಕಳು ಯಾವಾಗಲೂ ಚಲನಚಿತ್ರಗಳ ಸಂಗೀತವನ್ನು ಗೊಣಗುಟ್ಟುತ್ತಿರುತ್ತಾರೆ. ಇತ್ತೀಚೆಗೆ ಎಲ್ಲರೂ ಹೊಸ ಚಲನಚಿತ್ರಗಳ ವಿಜ್ಞಾಪನೆ (ಜಾಹಿರಾತೀ), ಕಲಾಕಾರರ ಭೇಟಿ (ಸಂಪರ್ಕ) ಚಲಚನಚಿತ್ರ, ಹಾಡು ಹಾಗೂ ವಿಕಿಪ್ತ, ಅಂಗವಿಕೇಪ ಹಾಗೂ ಹಾವಭಾವ ಮಾಡುವಂತಹ ನೃತ್ಯಗಳನ್ನು ನೋಡುತ್ತಾರೆ. ಆದುದರಿಂದ ನಾವು ಸಹ ಹಾಗೆ ಮಾಡ ಬೇಕೆಂಬ ಭಾವನೆ ಮಕ್ಕಳಲ್ಲಿ ನಿರ್ಮಾಣವಾಗುವುದು.
ಇತ್ತೀಚೆಗೆ ದೂರಚಿತ್ರವಾಣಿಯಲ್ಲಿ ೩ರಿಂದ ೧೫ ವರ್ಷಗಳ ಅಂತರದಲ್ಲಿನ ಚಿಕ್ಕ ಮಕ್ಕಳನ್ನು ಸಹ ನೃತ್ಯ, ಹಾಡು, ಅಭಿನಯ, ವಿನೋದ ಇತ್ಯಾದಿ ಮನೋರಂಜನೆಯ ಕಾರ್ಯಕ್ರಮಗಳಲ್ಲಿ ಸಮಾವೇಶ ಮಾಡಿಕೊಳ್ಳಲಾಗುತ್ತದೆ. ಅವರ ಮುಂದೆ ನೈತಿಕತೆಯಿಲ್ಲದ ಚಲನಚಿತ್ರ ನಟ-ನಟಿಯರ ಆದರ್ಶವನ್ನಿಡಲಾಗುತ್ತದೆ. ಈ ಕಾರ್ಯಕ್ರಮಗಳಿಂದ ಮಕ್ಕಳು ಹಾಗೂ ಅವರ ಪಾಲಕರ ಬಾವನೆಯೊಂದಿಗೆ ಆಟವಾಡಲಾಗುತ್ತದೆ. ಇದರಿಂದ ಅವರಲ್ಲಿ ಸ್ಪರ್ಧಾತ್ಮಕ ವಿಚಾರಗಳ ವೃದ್ಧಿಯಾಗತ್ತದೆ. ಇಂತಹ ಎಲ್ಲ ಮನೋರಂಜನೆಯಲ್ಲಿ ಮಕ್ಕಳೊಂದಿಗೆ ದೊಡ್ಡವರು ಸಹ ತಮ್ಮನ್ನು ಎಷ್ಟು ಹೊಂದಿಸಿಕೊಳ್ಳುತ್ತಾರೆಂದರೆ, ‘ರಾಷ್ಟ್ರ ಹಾಗೂ ಧರ್ಮದ ವಿಷಯದಲ್ಲಿ ನಮ್ಮದೇನಾದರೂ ಕರ್ತವ್ಯವಿದೆ, ಎಂಬುದನ್ನು ಮರೆತು ಬಿಡುತ್ತಾರೆ. 

ದೂರದರ್ಶನದ ದುಷ್ಪರಿಣಾಮ ಮತ್ತು ದೂರದರ್ಶನವನ್ನು ಹೇಗೆ ದೂರವಿಡುವಿರಿ?

೧.ದೂರದರ್ಶನದ ದುಷ್ಪರಿಣಾಮ
೧ ಅ. ತಮ್ಮ ಜೀವನದಲ್ಲಿನ ಅಮೂಲ್ಯವಾದ ಸಮಯ ವ್ಯರ್ಥವಾಗುವುದು: ಮಿತ್ರರೇ, ಇತ್ತೀಚೆಗೆ ದೂರದರ್ಶನ, ಅಂದರೆ ‘ಟಿ.ವಿ.’ ಎಂಬುದು ಎಲ್ಲರಿಗೂ ಜೀವಕ್ಕಿಂತ ಮಿಗಿಲಾಗಿದೆ. ಈ ಶಬ್ಧವು ಎಲ್ಲರನ್ನೂ ಮೋಡಿ ಮಾಡಿದೆ,ನಮ್ಮಂತಹ ಮಕ್ಕಳು ಬಾಯಾರಿಕೆ, ಹಸಿವು, ನಿದ್ರೆ, ಅಭ್ಯಾಸ, ಆಟ ಹಾಗೂ ಇನ್ನಿತರ ಕೆಲಸ ಬದಿಗಿಟ್ಟು ದೂರದರ್ಶನ ಕಾರ್ಯಕ್ರಮ ನೋಡುವುದರಲ್ಲಿ ಮಗ್ನರಾಗಿರುವುದು ಕಾಣಿಸುತ್ತಿದೆ. ಆ ಮಕ್ಕಳು ಜೀವನದಲ್ಲಿನ ಅಮೂಲ್ಯ ಹಾಗೂ ಪುನಃ ಎಂದೂ ಬಾರದ ಸಮಯವನ್ನು ವ್ಯರ್ಥಗೊಳಿಸುತ್ತಿದ್ದಾರೆ. 
ನಿರಂತರವಾಗಿ ದೂರದರ್ಶನ ನೋಡುವುದರಿಂದ ನಮ್ಮ ತಲೆ ಮತ್ತು ಕಣ್ಣು ನೋಯಲಾಂಭಿಸುವುದು: ಈಗ ನನ್ನ ಗೆಳತಿಯ ಉದಾಹರಣೆಯನ್ನೇ ನೋಡಿ!  ರವಿವಾರ ನಾನು ಅವಳನ್ನು ಸಂಸ್ಕಾರವರ್ಗಕ್ಕೆ ಕರೆಯಲು ಹೋಗುತ್ತೇನೆ. ಆಗ ಅವಳು ದೂರದರ್ಶನ ಯಂತ್ರದ (ಉಪಕರಣ) ಮುಂದೆ ಏಕಾಗ್ರತೆಯಿಂದ ಕುಳಿತಿರುತ್ತಾಳೆ. ಅವಳಿಗೆ ಯಾವುದೇ ವಿಷಯದ ಅರಿವಿರುವುದಿಲ್ಲ್ಲ. ಅವಳು ‘ಸಂಸ್ಕಾರವರ್ಗಕ್ಕೆ ಬರುವುದಿಲ್ಲ’, ಎಂದು ಸರಳವಾಗಿ ಹೇಳುತ್ತಾಳೆ. ದೂರದರ್ಶನ ನೋಡುದರಲ್ಲಿಯೇ ಮಜಾ ಇದೆ, ಎಂದು ಅವಳು ಹೇಳುವಾಗ ಅವಳ ತಂದೆ-ತಾಯಿ ಅವಳಿಗೆ ‘ದೂರದರ್ಶನ ನೋಡುತ್ತಾ ಸಮಯ ವ್ಯರ್ಥ ಮಾಡುವುದರ ಬದಲು ಸಂಸ್ಕಾರವರ್ಗಕ್ಕೆ ಹೋಗಿ ಏನಾದರೂ ಒಳ್ಳೇ ವಿಷಯ ಕಲಿತುಕೊ’, ಎಂದು ಹೇಳುವುದಿಲ್ಲ. ಸಾಯಂಕಾಲ ಆಟವಾಡಲು ಕರೆದಾಗ ಸಹ ಅವಳು ಹೀಗೆಯೇ ಮಾಡುತ್ತಾಳೆ, ಅಷ್ಟೇ ಅಲ್ಲ ಮಿತ್ರರೇ, ನನ್ನ ಈ ಗೆಳತಿಗೆ ದಪ್ಪ (ಹೆಚ್ಚು ನಂಬರಿನ) ಕನ್ನಡಿಯ ಕನ್ನಡಕ ಸಹ ಇದೆ. ಅವಳು ಕಣ್ಣು ನೋಯುತ್ತದೆಯೆಂದು ಯಾವಾಗಲೂ ಅಳುತ್ತಿರುತ್ತಾಳೆ ಹಾಗೂ ಶಾಲೆಯಲ್ಲಿ ಸಹ ಶಿಕ್ಷಕಿಯಿಂದ ಬೈಸಿಕೊಳ್ಳುತ್ತಾಳೆ. 

ಸಾಧನೆಯಿಂದ ಆತ್ಮಬಲವೃದ್ಧಿ ಮಾಡಿಕೊಲ್ಲಿ..

ವಿದ್ಯಾರ್ಥಿಗಳ ಅಸಫಲತೆಗೆ ಮುಖ್ಯ ಕಾರಣವು ಆಧ್ಯಾತ್ಮಿಕವಾಗಿದೆ! ಸದ್ಯ ಸಂಪೂರ್ಣ ವಾತಾವರಣವೇ ರಜತಮಯುಕ್ತವಾಗಿದೆ. ಪಾಶ್ಚಾತ್ಯ ಸಂಸ್ಕತಿಯ ಪ್ರಭಾವ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದೆ. ಅಲ್ಲದೆ ದೂರಚಿತ್ರವಾಹಿನಿಗಳ ಪ್ರಭಾವ ಸಹ ಪ್ರೋತ್ಸಾಹವನ್ನು ನೀಡುತ್ತಿದೆ. ಧರ್ಮಪಾಲನೆಯಾಗುವುದಿಲ್ಲ. ಇವೆಲ್ಲವುಗಳ ಪರಿಣಾಮವು ವಿಪರೀತವಾಗುತ್ತಾ ಹೋಗುತ್ತಿದೆ. ಬುದ್ಧಿ ಮತ್ತು ಮನಸ್ಸಿನ ಸ್ತರದಲ್ಲಾಗುವ ಪರಿಣಾಮವು ಈ ರೀತಿಯಿದೆ  ಮಕ್ಕಳ ಬುದ್ಧಿಶಕ್ತಿ ಕಡಿಮೆಯಾಗುತ್ತದೆ, ಅವರ ಸ್ಮರಣಶಕ್ತಿ ಹಾಗೂ ಗ್ರಹಣಶಕ್ತಿ ಕ್ಷೀಣಿಸುತ್ತದೆ, ಮನಸ್ಸಿನಲ್ಲಿ ನಿರಾಶೆಯುಂಟಾಗುವುದು, ಏನೂ ಮಾಡಲು ಇಚ್ಚೆಯಾಗದಿರುವುದು, ಶಾರೀರಿಕ ಸ್ತರದಲ್ಲಿ - ತಲೆನೋವು, ತಲೆ ಜುಮ್ಮೆನ್ನುವುದು ಇತ್ಯಾದಿ ಲಕ್ಷಣಗಳು ಕಂಡು ಬರುತ್ತವೆ. ಮಾನಸಿಕ ಸ್ತರದಲ್ಲಿ - ಕಿರಿ-ಕಿರಿಯಾಗುವುದು, ಕೆಲವು ಮನೋವಿಕಾರಗಳ ಪರಿಣಾಮ ಕಂಡು ಬರುವುದು ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ- ಸ್ಮರಣಶಕ್ತಿ ಕಡಿಮೆಯಾಗುವುದು, ಅಥವಾ ಸ್ಮರಣೆಯಿದ್ದರೂ ಪರೀಕ್ಷೆಯ ಸಂದರ್ಭದಲ್ಲಿ ಎಲ್ಲ ಮರೆತು ಹೋಗುವುದು ಮುಂತಾದ ತೊಂದರೆಗಳಾಗುತ್ತವೆ. ಮೇಲೆ ಕಾಣಿಸಿದ ಬೌದ್ಧಿಕ, ಶಾರೀರಿಕ ಹಾಗೂ ಮಾನಸಿಕ ತೊಂದರೆಗಳ ಹಿಂದಿನ ಕಾರಣವು ಆಧ್ಯಾತ್ಮಿಕ ಸ್ವರೂಪದ್ದಾಗಿರುತ್ತವೆ. ಜೀವನದಲ್ಲಿ ಶೇ. ೮೦ರಷ್ಟು ಸಮಸ್ಯೆಗಳ ಹಿಂದೆ ಆಧ್ಯಾತ್ಮಿಕ ಕಾರಣವಿರುವುದರಿಂದ ವಿದ್ಯಾರ್ಥಿಗಳ ಸಮಸ್ಯೆಗಳ ಹಿಂದೆ ಸಹ ಶೇ. ೮೦ರಷ್ಟು ಸಮಸ್ಯೆಗಳು ಆಧ್ಯಾತ್ಮಿಕವಾಗಿವೆ. 
ಕಲಿಯುಗದಲ್ಲಿ ಮಕ್ಕಳಿಗೆ ಬರುವ ತೊಂದರೆಗಳ ಪೈಕಿ ಹೆಚ್ಚಿನಂಶ ತೊಂದರೆಗಳು ಆಧ್ಯಾತ್ಮಿಕವಾಗಿರುತ್ತವೆ. ಇಂತಹ ಮಕ್ಕಳು ಅನಿಷ್ಟ ಶಕ್ತಿಯ ಜಾಲದಲ್ಲಿ ಸಿಲುಕುತ್ತವೆ. ಅವರ ಆಚರಣೆಗಳು ಸ್ವಾಭಾವಿಕವಾಗಿರುವುದಿಲ್ಲ. ಇತರರ ಬಗ್ಗೆ ಈರ್ಷೆ, ಪ್ರಥಮ ಶ್ರೇಣಿಯನ್ನುಗಳಿಸುವ ತೀವ್ರ ಇಚ್ಛೆ, ಶಿಕ್ಷಕರೊಂದಿಗೆ ತಪ್ಪು ಮಾತನಾಡುವುದು, ಮಾನಸಿಕ ಹಾಗೂ ಬೌದ್ಧಿಕ ಸಂತುಲನ ಕೆಡುವುದು, ಮುಂತಾದ ಲಕ್ಷಣಗಳು ಇಂತಹ ಮಕ್ಕಳಲ್ಲಿ ಕಂಡು ಬರುತ್ತದೆ. 
ಕೆಲವು ಮಕ್ಕಳು ಬುದ್ಧಿವಂತರಾಗಿದ್ದರೂ ಸಹ ಅವರಿಗೆ ತಮ್ಮ ಇಷ್ಟದಂತೆ ಯಶಸ್ಸು ದೊರೆಯುವುದಿಲ್ಲ. ಕೆಲವರಿಗೆ ಯಶಸ್ಸು  ದೊರೆಯುವುದು, ಆದರೆ ಅವರ ಅಪೇಕ್ಷೆಯಂತೆ ನೌಕರಿ ದೊರೆಯುವುದಿಲ್ಲ. ಕೆಲವರಿಗೆ ಒಳ್ಳೇ ನೌಕರಿ ಸಿಕ್ಕಿದರೂ ವರಿಷ್ಟರ ಕಿರುಕುಳದಿಂದಾಗಿ ಮಾನಸಿಕ ಒತ್ತಡವಿರುತ್ತದೆ. ಈ ರೀತಿ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಯಶಸ್ಸೇ ಇಲ್ಲದಂತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನಸ್ಸಿನಲ್ಲಿ ಆತ್ಮಹತ್ಯೆಯ ವಿಚಾರ ಬರುತ್ತದೆ. 
ಬಾಲಕರೇ ಮತ್ತು ಯುವಕರೇ, ಇತ್ತೀಚೆಗೆ ಪ್ರತಿದಿನದ ವಿದ್ಯಾರ್ಥಿಗಳ ಆತ್ಮಹತ್ಯೆಯ ಘಟನೆಗಳು, ಜೀವನದಲ್ಲಿ ನಿರಾಶೆ, ಕಷ್ಟ-ಕಾರ್ಪಣ್ಯ, ಹೋರಾಟ ಇತ್ಯಾದಿ ಒತ್ತಡಯುಕ್ತ ಪ್ರಸಂಗಗಳನ್ನು ಎದುರಿಸುವುದಕ್ಕಾಗಿ  ಆತ್ಮಬಲದ ಅವಶ್ಯಕತೆಯಿರುತ್ತದೆ. ಅದನ್ನು ಪೂರೈಸಲು ಇಂದಿನ ಶಿಕ್ಷಣ ಪ್ರಣಾಲಿ, ಸಮಾಜ ಮತ್ತು ಪಾಲಕರು ಅಯಶಸ್ವಿಯಾಗಿದ್ದಾರೆ. ಜೀವನದಲ್ಲಿನ ಶೇ. ೮೦ರಷ್ಟು ದುಃಖಗಳಿಗೆ ಮೂಲ ಕಾರಣ ಆಧ್ಯಾತ್ಮಿಕವಾಗಿದೆ, ಆದುದರಿಂದ ಅವುಗಳನ್ನು ಆಧ್ಯಾತ್ಮಿಕ ಉಪಚಾರಗಳಿಂದ ಅಂದರೆ ಸಾಧನೆಯಿಂದ ನಿವಾರಣೆ ಮಾಡಿಕೊಳ್ಳಬಹುದು. ಸಾಧನೆಯಿಂದ ಪ್ರಾಪ್ತಿಯಾದ ಆತ್ಮಬಲದಿಂದ ಮನಸ್ಸು ದೃಢವಾಗಿ, ಸಮಾಧಾನವಾಗಿ ಹಾಗೂ ಆನಂದಿತವಾಗಿರುತ್ತದೆ. ಮನಸ್ಸಿನ ಏಕಾಗ್ರತೆ ಹೆಚ್ಚಿಸಬಹುದು, ಹಾಗೂ ಮನಸ್ಸಿಗೆ ಶಾಂತಿಯೂ ದೊರೆಯುತ್ತದೆ. ಇಷ್ಟೇ ಅಲ್ಲ ಗಾಢ ನಿರ್ಧಾರ ಹಾಗೂ ಪಟ್ಟುಹಿಡಿಯುವಂತಹ ಗುಣಗಳು ನಿರ್ಮಾಣವಾಗಿ ಧ್ಯೇಯಪೂರ್ತಿಗಾಗಿ ಈಶ್ವರನ ಕೃಪಾಶೀರ್ವಾದ ಪ್ರಾಪ್ತಿಯಾಗುವುದು. ಅದರಿಂದಾಗಿ ಸಫಲತೆಯೂ ದೊರೆಯುವುದು. ಆದುದರಿಂದ ವಿದ್ಯಾರ್ಥಿಗಳೇ, ತಮ್ಮ ಜೀವನವನ್ನು ಸ್ಪರ್ಧಾತ್ಮಕ ಜೀವನವನ್ನಾಗಿಸದೆ ಮಾನವ ಜೀವನದ ವ್ಯಾಪಕತ್ವವನ್ನು ಕಲಿಸುವಂತಹ ಧರ್ಮವನ್ನು ತಿಳಿದುಕೊಳ್ಳಿರಿ ಹಾಗೂ ಧರ್ಮಾಚರಣೆಯೊಂದಿಗೆ ಪರಿಪೂರ್ಣ ಹಾಗೂ ಸಮೃದ್ಧ ಜೀವನವನ್ನು ಅನುಭವಿಸಿರಿ! ಜೀವನದಲ್ಲಿನ ನಿರಾಶೆಯನ್ನು ದೂರ ಮಾಡಲಿಕ್ಕಾಗಿ ಏನು ಮಾಡುವಿರಿ? ಚಿಕ್ಕ ಮಕ್ಕಳೊಂದಿಗೆ ಮನಪೂರ್ವಕವಾಗಿ ಆಟವಾಡಿರಿ, ಕೆಲವೊಮ್ಮೆ ಹೊರಗೆ ವಿಹಾರಕ್ಕಾಗಿ ಹೋಗಿರಿ, ಒಳ್ಳೆಯ ನಿದ್ರೆ ಮಾಡಿರಿ, ಗೆಳೆಯರೊಂದಿಗೆ, ಗೆಳತಿಯರೊಂದಿಗೆ ಅಥವಾ ಮನಮೆಚ್ಚುವ ಪರಿಚಯದವರೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿರಿ! ತನ್ನಿಂದ ಹೆಚ್ಚಿನ ಅಪೇಕ್ಷೆಯನ್ನಿಟ್ಟುಕೊಳ್ಳಬೇಡಿರಿ. ತನ್ನಿಂದಾದ ತಪ್ಪುಗಳನ್ನು ಸ್ವೀಕರಿಸಿರಿ. ತನ್ನ ಸ್ವಂತದ ಸ್ಥಿತಿಯನ್ನು ಸ್ವೀಕಾರ ಮಾಡಿರಿ. ನಮ್ಮಲ್ಲಿ ಕಲಿಯುವ ಭೂಮಿಕೆಯಿದೆಯೇ? ಎಂಬುದರ ಬಗ್ಗೆ ವಿಚಾರ ಮಾಡಿರಿ! ತನ್ನ ಸ್ವಂತದ ಕ್ಷಮತೆ ಮತ್ತು ಸೀಮೆಯನ್ನು ಅರಿತುಕೊಳ್ಳಿರಿ. ಪ್ರತಿಯೊಂದು ಪ್ರಸಂಗದಲ್ಲಿ ಉತ್ಸಾಹ ಹಾಗೂ ಆನಂದದಲ್ಲಿರಲು ಪ್ರಯತ್ನಿಸಿರಿ. ನಿನ್ನೆಯ ಸ್ಥಿತಿಗಿಂತ ಇಂದು ನಾನು ಒಂದು ಹೆಜ್ಜೆ ಮುಂದುವರಿಯುತ್ತಿದ್ದೇನೆಯೇ? ಎಂಬುದನ್ನು ಗಮನಿಸಿರಿ. ಒಂದು ವೇಳೆ ಹಾಗಾಗುತ್ತಿಲ್ಲವಾದರೆ, ಅದರ ಕಾರಣವನ್ನು ಕಂಡುಹಿಡಿದು ಅದನ್ನು ನಿವಾರಿಸಿಕೊಳ್ಳಬೇಕು. ಈಶ್ವರನ ಭಕ್ತಿ ಮಾಡಿರಿ. ಇವೆಲ್ಲ ನಮ್ಮಿಂದ ಸಾಧ್ಯವಾಗುವುದಕ್ಕಾಗಿ ಈಶ್ವರನ ಕೃಪೆಯಾಗಲಿ ಎಂದು ಮೇಲಿನ ಪ್ರತಿಯೊಂದು ಸಂದರ್ಭದಲ್ಲಿ ಪ್ರಾರ್ಥನೆ ಮಾಡಿರಿ. ನೀವು ಈಗಲೇ ಇವೆಲ್ಲವನ್ನೂ ಮಾಡುತ್ತಿದ್ದರೆ ಮುಂದಿನ ಆಧ್ಯಾತ್ಮಿಕ ಪ್ರಗತಿಗಾಗಿ ಅಷ್ಟಾಂಗ ಸಾಧನೆ ಮಾಡಿರಿ! ಅಷ್ಟಾಂಗ ಸಾಧನೆಯಲ್ಲಿ ಈ ಕೆಳಗಿನ ಸಾಧನೆಗಳು ಅಂತರ್ಭೂತವಾಗಿವೆ - ನಾಮಸ್ಮರಣೆ, ಸತ್ಸಂಗ, ಸತ್ಸೇವೆ, ತ್ಯಾಗ, ಪ್ರೀತಿ, ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ ಮತ್ತು ಭಾವಜಾಗೃತಿ. ಇದರಂತೆ ಪ್ರಯತ್ನಗಳನ್ನು ಮಾಡಿ ಆಧ್ಯಾತ್ಮಿಕ ಪ್ರಗತಿ ಹೊಂದಿರಿ.



ನಿಮ್ಮಲಿ ಧರ್ಮದ ಅಧಿಷ್ಠಾನವಿದೆಯೋ?

ಧರ್ಮ ಮನುಷ್ಯನಿಗೆ ಬದುಕುವುದನ್ನು ಕಲಿಸುತ್ತದೆ, ಮನುಷ್ಯನ ಸರ್ವಾಂಗೀಣ ಉನ್ನತಿಯನ್ನು ಮಾಡುತ್ತದೆ. ಯಾರಿಗೆ ಧರ್ಮದ ಅಧಿಷ್ಠಾನವಿದೆಯೋ, ಆ ಮನುಷ್ಯನ ಮನಸನ್ನು ನಿರಾಶೆಯು ಸ್ಪರ್ಷ ಕೂಡ ಮಾಡುವುದಿಲ್ಲ. ಧರ್ಮಾನುಸಾರ ಆಚರಣೆ ಮಾಡುವುದರಿಂದ ನಮ್ಮ ಆತ್ಮಬಲ ಹೆಚ್ಚುತ್ತದೆ ಮತ್ತು ಜೀವನದಲ್ಲಿನ ಪ್ರತಿಯೊಂದು ಪ್ರಸಂಗದಲ್ಲಿ ಹೋರಾಡಲು ಜೀವವು ಸಕ್ಷಮವಾಗುತ್ತದೆ. ಈಗಿನ ಕಾಲದಲ್ಲಿ ಜನರು ಜೀವವನ್ನು ಶಿವನಿಗೆ ಜೋಡಿಸದೆ ಪಾಶ್ಚಾತ್ಯ ವಿಕೃತಿಯೊಡನೆ ಜೋಡಿಸುವುದರಿಂದ ಹತ್ಯೆ ಮಾಡುವಂತಹ ಕೆಟ್ಟ ವಿಚಾರಗಳು ಮನುಷ್ಯನ ಮನಸ್ಸಿನಲ್ಲಿ ಬರುತ್ತದೆ ಮತ್ತು ಅವನು ಅದರಂತೆ ಮಾಡುತ್ತಾನೆ. ಆತ್ಮಹತ್ಯೆ ಎಂದರೆ ಆತ್ಮದ ಹತ್ಯೆ ಅಲ್ಲ, ತನ್ನ ಮನಸ್ಸಿನಂತೆ ತನ್ನ ದೇಹವನ್ನು ನಾಶ ಮಾಡುವುದು. ಆತ್ಮಹತ್ಯೆಯ ಮಾರ್ಗ ಅನುಸರಿಸುವುದರಿಂದ ನಿರಾಶೆ ನಷ್ಟವಾಗುವುದಿಲ್ಲ ಮತ್ತು ಸಮಸ್ಯೆ ನಿವಾರಣೆಯಾಗುವುದಿಲ್ಲ. ಅಧರ್ಮ ಕೊನೆಗೊಳ್ಳುವುದಿಲ್ಲ ಮತ್ತು ಅಧರ್ಮಿಯರು ಸುಧಾರಿಸುವುದಿಲ್ಲ. ಮನುಷ್ಯ ಜನ್ಮವನ್ನು ಈ ರೀತಿ ಕೊನೆಗೊಳಿಸಬೇಡಿ. ಇಂತಹ ದಯನೀಯ ಅವಸ್ಥೆಯಿಂದ ಹೊರಗೆ ಬಂದು ತನ್ನ ಉನ್ನತಿಯಾಗಲು ಧರ್ಮವನ್ನ್ನು ಅರಿತುಕೊಳ್ಳಿರಿ ಮತ್ತು ಧರ್ಮಾಚರಣೆ ಮಾಡಿರಿ.ಆತ್ಮಹತ್ಯೆಯಲ್ಲ, ಆತ್ಮಬಲ ಹೆಚ್ಚಿಸಿರಿ!
ಮುಂದೆ ಬರುವ ಪೀಳಿಗೆ ರಾಷ್ಟ್ರದ ಆಧಾರಸ್ತಂಭವಾಗಿದೆ. ಇವರನ್ನು ಜೋಪಾನ ಮಾಡುವುದು ಎಂದರೆ ನಮ್ಮ ರಾಷ್ಟ್ರವನ್ನು ಜೋಪಾನ ಮಾಡುವುದು. ಇದಕ್ಕಾಗಿ ತಮ್ಮ ಮಕ್ಕಳಿಗೆ ಧರ್ಮಶಿಕ್ಷಣ ಕೊಟ್ಟು ಆತ್ಮಬಲಸಂಪನ್ನ ರಾಷ್ಟ್ರದ ಪುನಃ ನಿರ್ಮಾಣ ಮಾಡುವುದು ಅಗತ್ಯವಾಗಿದೆ. ಭಾರತದ ಗೌರವಶಾಲಿ ಇತಿಹಾಸವನ್ನು ಪುನರುಜ್ಜೀವಿತ ಮಾಡಬೇಕಾಗಿದೆ. ನಿರಾಶೆಯನ್ನು ದೂರ ಮಾಡಲು ಸ್ವಯಂಸೂಚನೆಯು ತುಂಬಾ ಫಲದಾಯಕವಾಗಿದೆ. 

ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿರಿ ಮತ್ತು ನೀವೇ ನಿಮ್ಮ ಯಶಸ್ಸಿನ ಶಿಲ್ಪಿಗಳಾಗಿರಿ !

ಚಿಂತೆ, ನಿರಾಶೆ ಇತ್ಯಾದಿ ದೋಷಗಳಿಂದ ಪೀಡಿತ ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆಯಿಂದ ಒತ್ತಡಮುಕ್ತ ಗುಣಸಂಪನ್ನ ಮತ್ತು ಆನಂದಮಯ ಜೀವನದ ಲಾಭ ಸದ್ಯದ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿ ಜೀವನವನ್ನು ನಡೆಸಲು ಬೌದ್ಧಿಕ ಕ್ಷಮತೆಯ ಜೊತೆಗೆ ಧ್ಯೇಯಪ್ರಾಪ್ತಿಯ ಮಾರ್ಗದಲ್ಲಿ ಬರುವ ಅಡಚಣೆಗಳನ್ನು ಎದುರಿಸಲು ಉತ್ತಮ ಮನೋಬಲವಿರುವುದು ಅವಶ್ಯಕವಾಗಿದೆ.ಕೀಳರಿಮೆ, ಭಯ, ಚಿಂತೆ, ನಿರಾಶೆಯಂತಹ ಸ್ವಭಾವದೋಷಗಳಿಂದ ಮನಸ್ಸು ದುರ್ಬಲವಾಗುತ್ತದೆ. ನಮ್ಮಲ್ಲಿರುವ ಸ್ವಭಾವದೋಷಗಳನ್ನು ದೂರಗೊಳಿಸಿ ಗುಣಗಳನ್ನು ಬೆಳೆಸಿಕೊಂಡರೆ ನಮ್ಮ ವ್ಯಕ್ತಿತ್ವವು ವಿಕಸನವಾಗುತ್ತದೆ. ಇದರಿಂದ ಮನೋಬಲ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ.ಸ್ವಾರ್ಥ, ಮತ್ಸರ, ಸಿಡುಕು, ಚಿಂತೆಯನ್ನು ಮಾಡುವುದು ಇಂತಹ ದೋಷಗಳಿಂದಾಗಿ ಎಲ್ಲ ಸೌಲಭ್ಯಗಳಿದ್ದರೂ ವ್ಯಕ್ತಿಯು ಸುಖ ಮತ್ತು ಸಮಾಧಾನದಿಂದ ಇರಲಾರನು. ಜೀವನದಲ್ಲಿ ಯಾವಾಗಲೂ ಆನಂದದಿಂದ ಇರಬೇಕಾದರೆ ನಮ್ಮಲ್ಲಿರುವ ಸ್ವಭಾವದೋಷಗಳನ್ನು ದೂರಗೊಳಿಸಲು ಸತತವಾಗಿ ಮತ್ತು ತಳಮಳದಿಂದ ಪ್ರಯತ್ನವನ್ನು ಮಾಡುವುದು ಆವಶ್ಯಕವಾಗಿದೆ.

ಮಕ್ಕಳು ಚಿತ್ರಕಥೆ (ಕಾಮಿಕ್ಸ್) ಓದುವುದಕ್ಕಿಂತ ಪುರಾಣದಲ್ಲಿನ ಕಥೆಗಳನ್ನು ಓದುವುದರಿಂದ ಎಲ್ಲ ವಿಧಗಳಲ್ಲಿ ಅವರ ವಿಕಾಸವಾಗುವುದು!

‘ಮಕ್ಕಳು  ಎಲ್ಲಿಯೂ, ಎಂದಿಗೂ, ಯಾರೊಂದಿಗೂ ಇದ್ದರೂ ಅವರಿಗೆ ಚಿತ್ರಕಥೆಗಳದ್ದೇ ಅಮಲಿರುತ್ತದೆ. ಚಿತ್ರಕಥೆಗಳು (ಕಾಮಿಕ್ಸ್) ಮಕ್ಕಳ ಮಾನಸಿಕ, ವೈಚಾರಿಕ ಹಾಗೂ ಚಾರಿತ್ರ್ಯವನ್ನು ನಾಶಗೊಳಿಸುತ್ತವೆ. ಚಿತ್ರಕಥೆಗಳು ಮಕ್ಕಳ ಮನಸ್ಸು, ಬುದ್ಧಿ ಮತ್ತು ಎಲ್ಲ ರೀತಿಯ ವ್ಯಕ್ತಿತ್ವವನ್ನೇ ವಿಕೃತ, ಒಬ್ಬಂಟಿಗ, ಸಂವೇದನಶೂನ್ಯ ಮತ್ತು ಸತ್ವಹೀನಗೊಳಿಸುತ್ತವೆ. ಆ ಮಕ್ಕಳ ಜೀವನದಲ್ಲಿ ಯಾವುದೇ ಸಮಸ್ಯೆ ಅಥವಾ  ಅಡಚಣೆ ಬಂದಾಗ ಫ್ಯಾಂಟಮ್ ಅಥವಾ ಸುಪರಮ್ಯಾನ್ ಕ್ಷಣದಲ್ಲಿಯೇ ಅದನ್ನು ದೂರ ಮಾಡುತ್ತಾರೆ ಎಂಬ ಕಲ್ಪನೆಯಿರುತ್ತದೆ. ಆದುದರಿಂದ ಅವರು ವಾಸ್ತವಿಕತೆಯಿಂದ ದೂರ ಹೋಗುತ್ತಾರೆ ಹಾಗೂ ಅವರ ಕಾಲುಗಳು ನೆಲದಲ್ಲಿರುವುದಿಲ್ಲ. ಆ ಕಾಲ್ಪನಿಕ ಶಕ್ತಿಶಾಲಿ, ಧೈರ್ಯ, ಸಾಹಸ, ಮಕ್ಕಳ ಆದರ್ಶವಾಗುತ್ತದೆ. ವಾಸ್ತವಿಕದಲ್ಲಿ ಅವರು ಹಾಗಿರುವುದಿಲ್ಲವೆಂಬ ಸತ್ಯವನ್ನು ಮಕ್ಕಳು ಸ್ವೀಕರಿಸುವುದೇ ಇಲ್ಲ. ಅದರೊಂದಿಗೆ ಚಿತ್ರಕಥೆಗಳ ಭಾಷೆ ಅಶ್ಲೀಲ, ಪೊಳ್ಳು ಹಾಗೂ ವ್ಯಾಕರಣದ ದೃಷ್ಟಿಯಿಂದಲೂ ಶುದ್ಧವಾಗಿರುವುದಿಲ್ಲ. ಚಿತ್ರಕಥೆಗಳಲ್ಲಿ ವಾಕ್ಯಗಳ ಪ್ರಮಾಣ ಕಡಿಮೆ ಮತ್ತು ಚಿತ್ರಗಳ ಪ್ರಮಾಣ ಹೆಚ್ಚಿರುತ್ತದೆ. ಚಿತ್ರಗಳ ಆಧಾರದಿಂದಲೇ ಮಕ್ಕಳು ಕಲ್ಪನೆ ಮಾಡುತ್ತಾರೆ. ಅವರಲ್ಲಿ ಸ್ವತಂತ್ರವಾಗಿ ಕಲ್ಪನೆ ಮಾಡುವ ಹಾಗೂ ಚಿಂತನೆ ಮಾಡುವ ಕ್ಷಮತೆಯಿರುವುದಿಲ್ಲ. ಅವರ ದೃಷ್ಟಿಯ ಮೂಲಕ ಗ್ರಹಣಶಕ್ತಿಯು ಕ್ಷೀಣವಾಗುತ್ತಾ ಹೋಗುತ್ತದೆ.
ನಾವು ಮಕ್ಕಳಿಗೆ ಪುರಾಣದ ಕಥೆಗಳನ್ನು ಏಕೆ ಓದಲು ಕೊಡುವುದಿಲ್ಲ? ಅದರಿಂದ ಅವರ ಜ್ಞಾನ ವೃದ್ಧಿಯಾಗುವುದಂತೂ ನಿಜ, ಅದರೊಂದಿಗೆ ಅವರ ಶಾರೀರಿಕ, ಮಾನಸಿಕ, ಬೌದ್ಧಿಕ ವಿಕಾಸವಾಗುವುದು. ಮಕ್ಕಳಲ್ಲಿ ಧೈರ್ಯ, ಸಾಹಸ ನಿರ್ಮಾಣವಾಗುವುದು. ಅವರಲ್ಲಿ ಕುತೂಹಲ ಮತ್ತು ಜಿಜ್ಞಾಸೆ ಹೆಚ್ಚಾಗುವುದು. ಅವರ ಮನಸ್ಸು ಸಾಗರದಂತೆ ವಿಶಾಲವಾಗುವುದು.’- ಗುರುದೇವ ಡಾ. ಕಾಟೇಸ್ವಾಮೀಜಿ (ಘನಗರ್ಜಿತ, ಜೂನ್ ೨೦೦೯)  

‘ಸತ್ಯಂ ಶಿವಂ ಸುಂದರಂ’ ಎಂಬಂತಹ ಆಚರಣೆಯಲ್ಲಿರಿ!

ಸತ್ಯಂ: ಜೀವನದಲ್ಲಿ ಪ್ರತಿಯೊಂದು ಕೃತಿ ಮಾಡುವಾಗ ಸತ್ಯ ಹಾಗೂ ಸದಾಚರಣೆಗಳನ್ನು ಅನುಸರಿಸಿರಿ. 
ಶಿವಂ: ಪ್ರತಿಯೊಂದು ಕೃತಿ ಮಾಡುವ ಮೊದಲು ದೇವರಿಗೆ ಪ್ರಾರ್ಥನೆ ಮಾಡುವುದರಿಂದ ಹಾಗೂ ಕೃತಿ ಪೂರ್ಣವಾದ ನಂತರ 'ದೇವರು ಆ ಕೃತಿಯನ್ನು ನಮ್ಮಿಂದ ಮಾಡಿಸಿಕೊಂಡರು’ ಅದಕ್ಕಾಗಿ ದೇವರಿಗೆ ಕೃತಜ್ಞತೆ ವ್ಯಕ್ತಪಡಿಸುವುದರಿಂದ ಕರ್ಮವು ಪವಿತ್ರವಾಗುವುದು. 
ಸುಂದರಂ: ಬಟ್ಟೆಗಳನ್ನು ವ್ಯವಸ್ಥಿತವಾಗಿಡುವುದರಿಂದ ಹಿಡಿದು ಬರವಣಿಗೆ ಸುಂದರವಾಗಿ ಮಾಡುವ ತನಕ ಪ್ರತಿಯೊಂದು ಕೃತಿ ನಾಮಜಪವನ್ನು ಮಾಡುತ್ತಾ ತಪ್ಪುವಿರಹಿತವಾಗಿ ಹಾಗೂ ಪರಿಪೂರ್ಣವಾಗಿ ಮಾಡುವುದರಿಂದ ಅದು ‘ಸಾಧನೆ’ಯಾಗುವುದು. (‘ಸಾಧನೆ’ಯೆಂದರೆ ಈಶ್ವರಪ್ರಾಪ್ತಿಯಾಗುವುದಕ್ಕಾಗಿ ಮಾಡುವ ಪ್ರಯತ್ನ) ಈಶ್ವರ ‘ಸತ್ಯಂ ಶಿವಂ, ಸುಂದರಂ’ ಆಗಿದ್ದಾನೆ. ಮೇಲಿನಂತೆ ಆಚರಣೆ ಮಾಡಿದರೆ ವ್ಯಾವಹಾರಿಕ ಪ್ರಗತಿ ಆಗಿಯೇ ಅಗುತ್ತದೆ, ಹಾಗೂ ನಾವು ಈಶ್ವರನ ಗುಣಗಳೊಂದಿಗೆ, ಅಂದರೆ ಈಶ್ವರನೊಂದಿಗೆ ಶೀಘ್ರವಾಗಿ ಏಕರೂಪವಾಗುತ್ತೇವೆ. ಮಕ್ಕಳೇ, ‘ತ್ಯಾಗ’ವು ನಮ್ಮ ಸಂಸ್‌ಕೃತಿಯಾಗಿದೆ! ಇನ್ನೊಬ್ಬರ ವಸ್ತುವನ್ನು ಅವನಿಗೆ ಹೇಳದೇ ತೆಗೆದುಕಳ್ಳುವುದು, ಎಂದರೆ ‘ವಿಕೃತಿ’, ಅವನಿಗೆ ಹೇಳಿ ತೆಗೆದುಕೊಳ್ಳುವುದು ‘ಪ್ರಕೃತಿ’ ಹಾಗೂ ನಮ್ಮ ವಸ್ತು ಬೇರೆಯವರಿಗೆ ಕೊಡುವುದು ಎಂದರೆ ‘ಸಂಸ್‌ಕೃತಿ’. ಶಿಬಿ ರಾಜನು ಒಂದು ಪಕಿಯ ಜೀವ ಉಳಿಸುವುದಕ್ಕಾಗಿ ತನ್ನ ಶರೀರದ ಮಾಂಸವನ್ನು ನೀಡಿದ ಕಾರಣ ಅವನು ಅಮರನಾದನು. ತೀವೃವಾಗಿ ತಪಶ್ಚರ್ಯ ಮಾಡಿದಂತಹ ದಧೀಚಿಋಷಿ ರಾಕ್ಷಸರ ನಾಶಕ್ಕಾಗಿ ಬೇಕಾಗುವ ಆಯುಧ ನಿರ್ಮಿಸುವುದಕ್ಕಾಗಿ ದೇವತೆಗಳಿಗೆ ತನ್ನ ದೇಹದ ಎಲುಬುಗಳನ್ನು ನೀಡಿದ ಕಾರಣ ಅವರು ಆಧರಣೀಯರಾದರು. ಎಲ್ಲ ಪ್ರಾಣಿಗಳಿಗೆ ಪ್ರಕಾಶ ಹಾಗೂ ಜೀವನ ನೀಡುವುದಕ್ಕಾಗಿ ಸೂರ್ಯನು ಸದಾಕಾಲ ಸ್ವತಃ ಸುಡುತ್ತಾ ಇರುತ್ತಾನ, ಆದುದರಿಂದ ಅವನು ಪ್ರಾರ್ಥನಾಯೋಗ್ಯನಾಗಿದ್ದಾನೆ. ನದಿಯು ಜನರಿಗೆ ನೀರನ್ನು ಪೂರೈಸುತ್ತಾ ಮುಂದೆ ಹರಿಯುತ್ತದೆ, ಆದುದರಿಂದ ಜನರು ಅದನ್ನು ಪವಿತ್ರವೆಂದು ನಂಬುತ್ತಾರೆ. ತದ್ವಿರುದ್ಧ ಹಳ್ಳ ನೀರನ್ನು ಸೇಖರಿಸುತ್ತದೆ, ಅದು ಆರುವುದು ಹಾಗೂ ಒಣಗುವುದು. ಮನುಷ್ಯ ಸಂಚಯದಿಂದ ಸಂಕುಚಿತ ವೃತ್ತಿಯವನಾಗುತ್ತಾನೆ, ತ್ಯಾಗದಿಂದ ಉದಾರವೃತ್ತಿಯವನಾಗುತ್ತಾನೆ. ತ್ಯಾಗದಲ್ಲಿಯೇ ನಿಜವಾದ ಆನಂದವಿದೆ ಎಂಬುದನ್ನು ಗಮನದಲ್ಲಿಡಿರಿ. 
ಮಕ್ಕಳೇ, ನಮ್ಮ ವರ್ತನೆ ಹೀಗೆ ಇರಬೇಕು! ತಾಯಿ-ತಂದೆ, ಹಿರಿಯ ವ್ಯಕ್ತಿ, ಶಿಕ್ಷಕರು, ವಿದ್ವಾಂಸರು ಹಾಗೂ ಸಂತರು ಮುಂತಾದವರನ್ನು ಆಧರಿಸ ಬೇಕು ಹಾಗೂ ಅವರನ್ನು ಗೌರವಿಸ ಬೇಕು. ಯಾರಾದರೂ ಭೇಟಿಯಾದಾಗ ಅಥವಾ ಭೇಟಿ ಮುಗಿದ ನಂತರ ಅವರನ್ನು ಬೀಳ್ಕೊಡುವಾಗ ನಗುಮುಖದಿಂದ ನಮಸ್ಕಾರ ಮಾಡ ಬೇಕು. ಎಲ್ಲರೊಂದಿಗೆ ಪ್ರೇಮದಿಂದ ವರ್ತಿಸ ಬೇಕು ಹಾಗೂ ಅವಶ್ಯಕತೆಗನುಸಾರ ಸಹಾಯ ಮಾಡ ಬೇಕು. ಬೇರೆಯವರು ಅನುಪಸ್ಥಿತಿಯಲ್ಲಿ ಅವನ್ನು ನಿಂದಿಸುವುದು ಅಥವಾ ಚೇಷ್ಟೆ ಮಾಡ ಬಾರದು. ಇತರರಿಗೆ ನೀಡಿದ ವಚನ ಹಾಗೂ ಸಮಯವನ್ನು ಚಾಚೂ ತಪ್ಪದೆ ಪಾಲನೆ ಮಾಡ ಬೇಕು. ಸರ್ವಸಾಮಾನ್ಯವಾದ ಶಿಷ್ಟಾಚಾರವನ್ನು ಪಾಲನೆ ಮಾಡ ಬೇಕು, ಉದಾ. ನಾಲ್ಕು ಜನರ ಮಧ್ಯೆಯಿರುವಾಗ ಬಾಯಿಗೆ ರುಮಾಲು ಹಿಡಿಯದೆ ಶೀನುವುದು,ಕೆಮ್ಮುವುದು, ಅಥವಾ ಆಕಳಿಸ ಬಾರದು, ಮಾರ್ಗದಲ್ಲಿ ಉಗುಳ ಬಾರದು ಅಥವಾ ಗಲೀಜು ಮಾಡ ಬಾರದು. 

ವಿದ್ಯಾರ್ಥಿಗಳೇ, ಸ್ವಭಾವದೋಷಗಳನ್ನು ದೂರ ಮಾಡಿ ವ್ಯಕ್ತಿತ್ವವನ್ನು ವಿಕಾಸಗೊಳಿಸಿರಿ ಹಾಗೂ ಜೀವನವನ್ನು ಆನಂದಮಯಗೊಳಿಸಿರಿ!

ವಿದ್ಯಾರ್ಥಿಗಳೇ, ಇತ್ತೀಚೆಗೆ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದಕ್ಕಾಗಿ ಅಭ್ಯಾಸ, ವ್ಯಾಯಾಮ, ವಿವಿಧ ಭಾಷೆಗಳ ಅಧ್ಯಯನ, ಸ್ಪರ್ಧೆಪರೀಕೆ ಇತ್ಯಾದಿ ವಿವಿಧ ಮಾರ್ಗಗಳನ್ನು ಅವಲಂಬಿಸಲಾಗುತ್ತದೆ. ನಿಜವಾಗಿಯೂ ವ್ಯಕ್ತಿಗಳಲ್ಲಾಗುವ ಆಂತರಿಕ ಸುಧಾರಣೆಯೆಂದರೆ ವ್ಯಕ್ತಿತ್ವವಿಕಾಸ! ಭಯ ಮುಂತಾದ ಸ್ವಬಾವದೋಷಗಳ ನಿರ್ಮೂಲನೆ, ಹಾಗೂ ಗುಣಗಳ ಸಂವರ್ಧನೆ ಮಾಡಿ ಆಂತರಿಕ ವಿಕಾಸ ಸಾಧಿಸ ಬಹುದು. ಏಕಾಗ್ರತೆಯ ಅಭಾವ, ಬವಿಷ್ಯದ ಚಿಂತೆ ಇತ್ಯಾದಿ ದೋಷಗಳನ್ನು ಸಹ ಸ್ವಭಾವದೋಷ- ನಿರ್ಮೂಲನೆಯಿಂದ ನಿವಾರಣೆ ಮಾಡಲು ಸಾಧ್ಯವಿರುವುದರಿಂದ ಜೀವನವು ಆನಂದಮಯ ಹಾಗೂ ಆದರ್ಶವಾಗುವುದು. ಸ್ವಭಾವದೋಷ- ನಿರ್ಮೂಲನೆ ಹಾಗೂ ಗುಣಸಂವರ್ಧನೆಯ ಪ್ರಕ್ರಿಯೆಯ ಬಗ್ಗೆ ಸನಾತನದ ಸತ್ಸಂಗದಲ್ಲಿ ಮಾಹಿತಿ ದೊರೆಯುತ್ತದೆ, ಹಾಗೂ ಗ್ರಂಥಮಾಲಿಕೆ ‘ಸ್ವಭಾವದೋಷ- ನಿರ್ಮೂಲನೆ’ ಇದರಿಂದ ಹಾಗೂ ನಿಯತಕಾಲಿಕೆ ‘ಸನಾತನ ಪ್ರಭಾತ’ ಇದರಿಂದ ದೊರೆಯುತ್ತದೆ!

ಮಕ್ಕಳೇ, ಸದ್ಗುಣಿಗಾಳಾಗಿ ಈಶ್ವರನಿಗೆ ಪ್ರಿಯರಾಗಿರಿ! ಯಾವಾಗಲೂ ಸತ್ಯ ಮಾತನಾಡಿರಿ ಹಾಗೂ ಸತ್ಯಮಾರ್ಗದಲ್ಲಿ ನಡೆಯಿರಿ!

ಮನುಷ್ಯ ಶೇ. ೧೦೦ರಷ್ಟು ಸತ್ಯ ಮಾರ್ಗದಲ್ಲಿ ಹೋದರೆ, ಅವನ ಪ್ರತಿಯೊಂದು ಕೃತಿಯು ಯಶಸ್ವಿಯಾಗುವುದು’, ಎಂದು ಪಾತಂಜಲಿಮುನಿಯವರು ಹೇಳಿದ್ದಾರೆ. ಮನಸ್ಸಿನಲ್ಲಿ ಇತರರ ವಿಷಯದಲ್ಲಿ ಕೆಟ್ಟ ವಿಚಾರ ಮಾಡ ಬೇಡಿ ಅಥವಾ ಅವರಿಗೆ ದುಃಖ ನೀಡ ಬೇಡಿರಿ. ಇತರರಿಗೆ ದುಃಖ ನೀಡುವುದರಿಂದ ನಾವು ಸುಖಿಯಾಗುವುದಿಲ್ಲ. ತಮ್ಮ ಸುಖದಲ್ಲಿ ಇತರರನ್ನು ಸಹ ಸಹಭಾಗಿಗಳನ್ನಾಗಿಸಿಕೊಳ್ಳಿರಿ! ಸ್ವಾರ್ಥಿಯಾಗ ಬೇಡಿ, ತಮಗೆ ದೊರೆತ ಜ್ಞಾನವನ್ನು ಇತರರಿಗೆ ಸಹ ನೀಡಿರಿ. ಜ್ಞಾನ ನೀಡುವುದರಿಂದ ಅದು ವೃದ್ಧಿಯಾಗುವುದು! ತಮ್ಮ ಆತ್ಮವಿಶ್ವಾಸದಿಂದ ತಮ್ಮ ಮಾರ್ಗದಲ್ಲಿನ ಅಡಚಣೆಗಳನ್ನು ನಿವಾರಿಸಿಕೊಂಡು ತಮ್ಮ ಧ್ಯೇಯವನ್ನು ತಲಪಿರಿ! ಸ್ವಂತದ, ಕುಟುಂಬದ, ಹಾಗೂ ರಾಷ್ಟ್ರ ಮತ್ತು ಧರ್ಮದ ರಕ್ಷಣೆ ಮಾಡುವುದಕ್ಕಾಗಿ ಬಲಶಾಲಿ ಹಾಗೂ ದೈರ್ಯಶಾಲಿಗಳಾಗಿರಿ!  

ಮಕ್ಕಳೇ, ಸ್ವಾವಲಂಬಿಗಳಾಗಿರಿ

ಮಲಗಿ ಎದ್ದ ನಂತರ ತಮ್ಮ  ಹಾಸಿಗೆ ಹಾಗೂ ಹೊದಿಕೆಗಳನ್ನುಅಚ್ಚುಕಟ್ಟಾಗಿ ಮಡಚಿಡಬೇಕು.ಅಧ್ಯಯನ ಮುಗಿದ ನಂತರ ಪುಸ್ತಕ, ಲೇಖನಿ ಮತ್ತು ಕಡತಗಳನ್ನು ಯೋಗ್ಯ ಸ್ಥಳದಲ್ಲಿ ಇಡಬೇಕು.ಶಾಲೆಯಿಂದ ಬಂದ ಕೂಡಲೇ ಮೊದಲು ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದು ಬಟ್ಟೆ ಬದಲಾಯಿಸಬೇಕು.ಅನಂತರ ತೆಗೆದ ಬಟ್ಟೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಬೇಕು.ಉಪಾಹಾರ ಮತ್ತು ಊಟವಾದ ನಂತರ ತಟ್ಟೆ-ಲೋಟಗಳನ್ನು ಸ್ವತಃ ತೊಳೆಯಬೇಕು.ಬಟ್ಟೆಯ ಗುಂಡಿ ಹೋದರೆ ಸ್ವತಃ ಹಾಕಬೇಕು ಮತ್ತು ಬಟ್ಟೆ ಸ್ವಲ್ಪ ಹರಿದರೆ ಅದನ್ನು ಸ್ವತಃ ಹೊಲಿಯಬೇಕು.


ನಿಸರ್ಗದ ನಿಯಮಕ್ಕನುಸಾರವಾಗಿ ದಿನಚರ್ಯದ ಅವಶ್ಯಕತೆ!

ಮನುಷ್ಯನು ಅವನ ಜೀವನ ಪೂರ್ತಿ ಆರೋಗ್ಯವಾಗಿರಬೇಕು, ಅವನಿಗೆ ಯಾವ ವಿಕಾರವೂ ಬರಬಾರದು.ಈ ದೃಷ್ಟಿಯಿಂದ ದಿನಚರ್ಯೆಯ ವಿಚಾರ ಮಾಡಲಾಗುತ್ತದೆ. ಮನುಷ್ಯನು ದಿನವೆಲ್ಲ ಯಾವ ರೀತಿಯ ಆಹಾರವನ್ನು ಸ್ವೀಕರಿಸುತ್ತಾನೆ, ಯಾವ ರೀತಿಯ ಆಚರಣೆ ಮಾಡುತ್ತಾನೆ, ಇದರ ಮೇಲೆ ಅವನ ಸ್ವಾಸ್ತ್ಯವು ನಿರ್ಧರಿಸುತ್ತದೆ. ಆರೋಗ್ಯದ ದೃಷ್ಟಿಯಿಂದ  ದಿನಚರ್ಯೆಯು ಮಹತ್ವಪೂರ್ಣವಾಗಿದೆ.ದಿನಚರ್ಯೆಯು ನಿಸರ್ಗದ ನಿಯಮಕ್ಕನುಸಾರವಾಗಿದ್ದರೆ, ಅದರ ಆಚರಣೆಯಿಂದ ಮನುಷ್ಯರಿಗೆ ಕಷ್ಟವಾಗದೆ ಲಾಭವೇ ಆಗುತ್ತದೆ. ಆದ್ದರಿಂದಲೇ ಪ್ರಕೃತಿಯ ನಿಯಮದ ಅನುಸಾರವಾಗಿದ್ದರೆ (ಧಾರ್ಮಿಕ ವಿಧಾನದ ಅನುಸಾರ) ಆಚರಣೆ ಅವಶ್ಯಕವಾಗಿದೆ. ಉದಾ - ಬೆಳಿಗ್ಗೆ ಏಳುವುದು, ಎದ್ದ ನಂತರ ಹಲ್ಲನ್ನು ಸ್ವಚ್ಛಗೊಳಿಸುವುದು, ಸ್ನಾನ ಮಾಡುವುದು ಇತ್ಯಾದಿ

ಸುಸಂಸ್ಕಾರಿತ ಭಾವಿ ಪೀಳಿಗೆಯ ನಿರ್ಮಾಣಕ್ಕಾಗಿ ನಮ್ಮ ಪ್ರಯತ್ನ

ಸನಾತನ ಯುಗದಲ್ಲಿ ಗುರುಗಳ ಮನೆಯಲ್ಲಿದ್ದು ಶಿಕ್ಷಣವನ್ನು ಪಡೆಯುವ ಗುರುಕುಲ ಪರಂಪರೆಯು ಇರುತ್ತಿತ್ತು. ಆದರೆ ಕೆಲವು ದಶಕಗಳಿಂದ ಗುರುಕುಲ ಪರಂಪರೆಯು ಲೋಪವಾಗಿದೆ. ಈಗಿನ ಶಿಕ್ಷಣ ಪ್ರಣಾಲಿಯ ದುರ್ದಶೆಯ ಬಗ್ಗೆ ನಮಗೆಲ್ಲ ತಿಳಿದಿದೆ. ಈಗಿನ ಶಿಕ್ಷಣ ಪದ್ಧತಿಯಿಂದ ಮಕ್ಕಳಿಗೆ ಅನೇಕ ವಿಷಯಗಳ ಬಗ್ಗೆ ಅರಿವು ಮೂಡುತ್ತದೆ, ಆದರೆ ವಿದ್ಯಾಲಯದ ಮತ್ತು ಮಹಾವಿದ್ಯಾಲಯದ ಪಠ್ಯಕ್ರಮಗಳಲ್ಲಿ ಪ್ರಾಮಾಣಿಕತೆ, ಸತ್ಯ, ಪ್ರೀತಿ, ತ್ಯಾಗ ಇತ್ಯಾದಿ ಅನೇಕ ನೈತಿಕ ಮೌಲ್ಯಗಳ ವಿಕಾಸಕ್ಕಾಗಿ ಯೋಗ್ಯ ಶಿಕ್ಷಣ ಕೊಡುವುದಿಲ್ಲ. ಪರಿಣಾಮವಾಗಿ ಮಕ್ಕಳಿಗೆ ತಮ್ಮ ಜೀವನದ ನಿಜವಾದ ಉದ್ದೇಶವು ತಿಳಿಯುವುದಿಲ್ಲ. ವಿದೇಶಿ ಸಂಸ್ಕೃತಿಯಂತೆ ಆಚರಿಸುವುದು, ಮೋಜಿನ ಜೀವನ ಜೀವಿಸುವುದು, ಕಡಿಮೆ ಪರಿಶ್ರಮದಿಂದ ಶೀಘ್ರ ಅಥವಾ ಹೆಚ್ಚು ಹಣವನ್ನು ಸಂಗ್ರಹಿಸಲು ಜೀವನವಿಡಿ ಪ್ರಯತ್ನಿಸಲಾಗುತ್ತದೆ. ಆದುದರಿಂದ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೀತಿ, ಅಭಿಮಾನವಿಟ್ಟು ಏನಾದರೂ ಮಾಡುವುದು ತಮ್ಮ ಕರ್ತವ್ಯವೆಂದು ಈಗಿನ ಪೀಳಿಗೆಯು ಮರೆತು ಬಿಟ್ಟಿದೆ. ಇವೆಲ್ಲ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಧರ್ಮಾಭಿಮಾನಿ ಮತ್ತು ಸುಸಂಸ್ಕಾರಿತ ಪೀಳಿಗೆಯನ್ನು ನಿರ್ಮಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ.
ಇಲ್ಲಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಹೇಗೆ ಏಕಾಗ್ರತೆ ಸಾಧಿಸಬಹುದು? ಎಂಬುದರಿಂದ ಹಿಡಿದು ಗುಣ - ದೋಷಗಳ ಅಭ್ಯಾಸ ಮಾಡಿ ತನ್ನಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಹೇಗೆ ನಿರ್ಮಿಸುವುದು? ಇತ್ಯಾದಿ ಎಲ್ಲ ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡಲಾಗುತ್ತದೆ. ಸಾತ್ತ್ವಿಕತೆ ಹೆಚ್ಚಾದ ನಂತರ ಮಕ್ಕಳಲ್ಲಿ ಅನೇಕ ಪರಿವರ್ತನೆಗಳಾಗುತ್ತದೆ. ಸಾಧನೆಯಿಂದ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಆದುದರಿಂದ ‘ಸಾಧನೆ ಮಾಡುವುದು’ ನಮ್ಮ ಪ್ರಮುಖ ಕೇಂದ್ರಬಿಂದುವಾಗಿದೆ. ಇಲ್ಲಿ ಮಕ್ಕಳಿಗೆ ಸರಳವಾಗಿ ಸಾಧನೆ ಅಂದರೆ ನಾಮಜಪವನ್ನು ಕಲಿಸಲಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಕುಲದೇವತೆ ಮತ್ತು ದತ್ತನ ನಾಮಜಪವನ್ನು ಕಲಿಸಲಾಗುತ್ತದೆ. ದೇವತೆಗಳ ಬಗ್ಗೆ ಪ್ರೀತಿ ನಿರ್ಮಾಣವಾಗಿ ಭಕ್ತಿ-ಭಾವದಲ್ಲಿ ವೃದ್ಧಿಯಾಗಲು, ಮಕ್ಕಳಿಗೆ ದೇವತೆಗಳ ಆರತಿ, ಭಜನೆ ಮತ್ತು ಶ್ಲೋಕಗಳನ್ನು ಕಲಿಸಲಾಗುತ್ತದೆ. ಹಿಂದೂ ಹೊಸವರ್ಷಾರಂಭ, ಗಣೇಶ ಚತುರ್ಥಿ, ನವರಾತ್ರೋತ್ಸವ, ದಸರಾ, ದೀಪಾವಳಿ ಮತ್ತು ಹಬ್ಬಗಳು, ಉತ್ಸವಗಳು ಮತ್ತು ವ್ರತಗಳನ್ನು ಏಕೆ ಆಚರಿಸಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು, ಎಂಬುದನ್ನು ಮಕ್ಕಳಿಗೆ ಕಲಿಸಲಾಗುತ್ತದೆ. ಆಲಸ್ಯ, ಕಿರಿಕಿರಿ, ಅವ್ಯವಸ್ಥಿತತನ ಇತ್ಯಾದಿ ದೋಷಗಳಿಂದ ನಮಗೆ ಯಾವ ಹಾನಿಯಾಗುತ್ತದೆ, ಅದನ್ನು ನಿವಾರಿಸಲು ಪ್ರತಿದಿನ ನಿಯಮಿತವಾಗಿ ತಮ್ಮ ತಪ್ಪುಗಳನ್ನು ಬರೆಯುವುದು, ಅವುಗಳ ಮೂಲದೋಷಗಳನ್ನು ಬರೆಯುವುದು ಮತ್ತು ಅವುಗಳನ್ನು ದೂರ ಮಾಡಲು ಸ್ವಯಂಸೂಚನೆ ಕೊಡುವುದು ಇತ್ಯಾದಿ ಸುಲಭವಾದ ಪದ್ಧತಿಗಳನ್ನು ಕಲಿಸಲಾಗುತ್ತದೆ.
ದೂರಚಿತ್ರವಾಹಿನಿಯಲ್ಲಿ ತೋರಿಸಲಾಗುವ ಕಾರ್ಯಕ್ರಮ, ಹೆಚ್ಚುತ್ತಿರುವ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಮಕ್ಕಳಿಗೆ ಹಿಂದೂ ಸಂಸ್ಕೃತಿ, ಧರ್ಮದ ಬಗ್ಗೆ ಗೌರವ, ಅಭಿಮಾನ ಮತ್ತು ಪ್ರೀತಿಯಿರುವುದಿಲ್ಲ. ಆದುದರಿಂದ ಹಿಂದೂ ಧರ್ಮನಿಷ್ಠ ರಾಜರ ಪರಾಕ್ರಮದ ಬಗ್ಗೆ ಮಾಹಿತಿಯನ್ನು ಕೊಡಲಾಗುತ್ತದೆ.
ಹಿಂದೂ ಧರ್ಮದ ಪ್ರತಿಯೊಂದು ಕೃತಿಗಳು ಚೈತನ್ಯವನ್ನು ನಿರ್ಮಾಣ ಮಾಡುತ್ತವೆ ಅಥವಾ ಸಾತ್ತ್ವಿಕತೆಯನ್ನು ಹೆಚ್ಚಿಸುತ್ತವೆ. ಆದುದರಿಂದ ‘ನಮಸ್ಕಾರವನ್ನು ಹೇಗೆ ಮಾಡುವುದು, ದೇವಸ್ಥಾನದಲ್ಲಿ ದೇವರ ದರ್ಶನವನ್ನು ಹೇಗೆ ಮಾಡುವುದು, ದೇವತೆಗಳ ಪೂಜೆಯನ್ನು ಹೇಗೆ ಮಾಡುವುದು, ಹುಟ್ಟುಹಬ್ಬವನ್ನು ಹೇಗೆ ಆಚರಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಧರ್ಮಶಿಕ್ಷಣವನ್ನು ಕೊಡಲಾಗುತ್ತದೆ.
ರಾಮರಕ್ಷಾ, ಹನುಮಾನ ಚಾಲಿಸಾ, ಗಣಪತಿ ಅಥರ್ವಶೀರ್ಷ ಇತ್ಯಾದಿ ಪಠಿಸುವುದರಿಂದ ಕೆಟ್ಟ ಶಕ್ತಿಗಳಿಂದ ಅಧ್ಯಯನದಲ್ಲಿ ಬರುವ ತೊಂದರೆಗಳ ನಿವಾರಣೆಯಾಗುತ್ತದೆ. ಮಕ್ಕಳು ನಾಮಜಪ ಮತ್ತು ಸ್ತೋತ್ರಗಳನ್ನು ಪಠಿಸುವುದರಿಂದ ಅಧ್ಯಯನದಲ್ಲಿ ಏಕಾಗ್ರತೆ ಬರುತ್ತದೆ ಮತ್ತು ಉಚ್ಚಾರವೂ ಸ್ಪಷ್ಟವಾಗುತ್ತದೆ.

ಸ್ಪರ್ಧಾತ್ಮಕ ಜೀವನಶೈಲಿಯನ್ನು ಪೂರ್ಣವಿರಾಮಗೊಳಿಸಿ!

ಇವತ್ತಿನ ಜಗತ್ತು ಸ್ಪರ್ಧಾತ್ಮಕವಾಗಿದೆ. ಅನೇಕ ಮನೊವೈಜನಿಕರ ಅನಿಸುವಿಕೆ ಎಂದರೆ ಪ್ರಸ್ತುತ ಯಾವ ಹುಡುಗರು ಆತ್ಮ್ಮಹತ್ಯೆ ಮಾಡಿದಾರೆ ಅವರಲ್ಲಿ ಈ ಸ್ಪರ್ಧಾತ್ಮಕ ಯುಗಕೆ ಹೇಗೆ ಎದುರಿಸುವುದು ಎಂಬ ಪ್ರಶ್ನೆ ಅನೇಕರಿಗೆ ನಿರ್ಮಾಣವಾಗಿತ್ತು. ಈ ಸ್ಪರ್ಧಾತ್ಮಕ ಯುಗದಬಗ್ಗೆ ಸ್ವಲ್ಪವಾದರು ವಿಚಾರವಾಗಬೇಕು. ಮನುಷ್ಯನ ಆಕಾಂಕ್ಷೆ ಎಂದಿಗು ಸಮಾಪ್ತವಾಗುವುದಿಲ್ಲ. ಸ್ಪರ್ಧೇಬಗ್ಗೆ ವಿಚಾರ ಮಾಡಬೇಕಾದರೆ ವಿಶ್ವದ ಮೊದಲನೇಯ ಹತ್ತು ಧನೀಕರು,ಏದು ವರ್ಷದ ಹಿಂದಿನ ವಿಶ್ವಸುಂದರಿಯರು, ಈ ವರ್ಷದ ಏದು ನೊಬೆಲ ಪ್ರಶ್ಸತಿ ಪಡೆದವರು,ಕಳೇದ ಎರಡು ವರ್ಷದ ಆಸಕರ ಪ್ರಶ್ಸತಿ ಪಡೆದವರು ಹೇಸರು ಈ ಕ್ಷಣ ನಿಮಗೆ ನೆನಪು ಇದೆಯಾ? ಇಲ್ಲವಲಾ.ಈ ಗೆದ್ದವರಿಗೆ ತಟ್ಟಿಸಿದ ಚಪ್ಪಳಿಯ ಸಪ್ಪಳ ಶಾಂತವಾಗುತ್ತದೆ,ಪದಕ ಮತ್ತು ವಿಜಯಸ್ಮಾರಕವನ್ನು ಧುಳಗೊಳಿಸುತ್ತವೆ ಮತ್ತು ಜೀವನವು ಪುನಾ: ಸಾಮಾನ್ಯವಾಗುತ್ತದೆ. ಸ್ಪರ್ಧೆಯ ಕಾರಣ ಆನಂದಿತನಾಗುವ ಒಬ್ಬನೆವಾಗುತ್ತಾನೆ ಮತ್ತು ಅವನ ಪ್ರಸನ್ನ ಇರುವ ಸಮಯವು ಸಿಮಿತವಾಗುತ್ತದೆ.ಆದರಿಂದ ಶಾಶ್ವತ ಆನಂದ ಎಲ್ಲಿ ಸಿಗುವುದು ಎಂಬ ಪ್ರಶ್ನೆ ಬರುತ್ತದೆ. ಇದು ಯಾವದೆ ಶಾಲೇ ಅಥವಾ ಕಾಲೆಜಗಳಲ್ಲಿ ಕಲಿಸುವುದಿಲ್ಲ.ಅದಕೆ ಸಾಧನೆ ಮಾಡುವುದು ಅಗತ್ಯವಾಗಿದೆ. ಆದರಿಂದ ಪ್ರತಿಕೂಲ ಪರಿಸ್ಥಿತಿಯಲ್ಲಿಸಹ ಭಕ್ತ ಪ್ರಲ್ಹಾದ ಆನಂದವಾಗಿ ಇದ್ದನು. ಛತ್ರಪತಿ ಶಿವಾಜಿ ಮಹಾರಾಜರು ಸಾಧನೇಯ ಬಲದಿಂದ ಹಿಂದವಿ ಸ್ವರಾಜ್ಯದ ಸ್ಥಾಪನೆ ಮಾಡಿದರು ಅದರೆ ಮುಸಲಮಾನರೊಂದಿಗೆ ಸ್ಪರ್ಧೆಮಾಡಲ್ಲಿಲ.
ಸ್ವರಸಮ್ರಾಜ್ಞಿ ಲತಾ ಮಂಗೆಶಕರವರ ಗಾಯನದಲ್ಲಿ ಯಾರೊಂದಿಗೆ ಸ್ಪರ್ಧೆ ಇರಲ್ಲಿಲ, ಅವರು ಸರಸ್ವತಿಯ ರುಪದಲ್ಲಿ ಕಲೇಯ ಉಪಾಸನೇ ಮಾಡಿದರು. ಗಣಕಯಂತ್ರತಜ್ಞ ಡಾ.ವಿಜಯ ಭಾಟಕರರು ಪರಮಗಣಕಯಂತ್ರ ಸಿಧ್ದ ಮಾಡುವುದಕೆ ಯಾರೊಂದಿಗೆ ಸ್ಪರ್ಧೆ ಮಾಡಲ್ಲಿಲ.



ತಾಯಿ-ತಂದೆಯರು ನಮಗಾಗಿ ಮಾಡುವ ಕೃತಿಗಳ ಋಣವನ್ನು ಹೇಗೆ ತೀರಿಸುವುದು?

ತಾಯಿಯು ನಮ್ಮ ಬೇಕು-ಬೇಡಗಳ ಕಡೆಗೆ ಸಂಪೂರ್ಣ ಗಮನ ಹರಿಸುತ್ತಾಳೆ. ಇದೆಲ್ಲವನ್ನು ಮಾಡುತ್ತಿರುವಾಗ ಅವಳು ಎಂದೂ ತನ್ನ ಬಗ್ಗೆ ವಿಚಾರ ಮಾಡುವುದಿಲ್ಲ. ಅವಳ ಮನಸ್ಸಿನಲ್ಲಿ ಸತತ ಮಕ್ಕಳದ್ದೇ ವಿಚಾರವಿರುತ್ತದೆ. ಹಾಗೆಯೇ, ತಂದೆಯೂ ನಮ್ಮ ಎಲ್ಲ ಕರ್ತವ್ಯಗಳನ್ನು ಪೂರೈಸಲು ಮತ್ತು ಕುಟುಂಬದ ಪಾಲನೆ ಪೋಷಣೆ ಮಾಡಲು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ.
ನಮಗೆ ಅವಶ್ಯವಿರುವುದನ್ನು ತಂದು ಕೊಡುತ್ತಾರೆ. ಇದನ್ನೆಲ್ಲ ಮಾಡು ವಾಗ ಅವರು ತಮಗಿಂತ ಹೆಚ್ಚಾಗಿ ನಮ್ಮ ವಿಚಾರವನ್ನೇ ಮಾಡುತ್ತಾರೆ. ಆದರೆ ಈ ತುಲನೆಯಲ್ಲಿ ನಾವು ತಾಯಿ-ತಂದೆಯವರು ಹೇಳಿದ್ದನ್ನು ಕೇಳುತ್ತೇವೆಯೇ? ಎಂಬ ವಿಚಾರವನ್ನು ಮಾಡಬೇಕು ಮತ್ತು ಈ ದೃಷ್ಟಿಯಿಂದ ಅವರ ಆಜ್ಞಾಪಾಲನೆಯನ್ನು ಮಾಡಬೇಕು. ನಾವು ಅವರ ಸೇವೆಯನ್ನು ಎಷ್ಟೇ ಮಾಡಿದರೂ ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ವರ್ತನೆಯಿಂದಲಾದರೂ ಅವರಿಗೆ ದುಃಖವಾಗದಂತೆ ನೋಡಿಕೊಳ್ಳ ಬೇಕು. ಅವರು ದೇವರಿಗೆ ಸಮಾನರಾಗಿರುವುದರಿಂದ ಒಂದು ವೇಳೆ ನಮ್ಮಿಂದಾಗಿ ಅವರಿಗೆ ದುಃಖವಾದರೆ ದೇವರಿಗೇ ದುಃಖಿಸಿದ ಪಾಪ ತಗಲು ವುದಿಲ್ಲವೇ? ಇದಕ್ಕಾಗಿ ನಾವು ಅವರು ಹೇಳಿದ ಪ್ರತಿಯೊಂದು ಅಂಶವನ್ನು ಕೇಳಬೇಕು. ಮಾತನಾಡುವಾಗ ಗೌರವದಿಂದ ಮಾತನಾಡಬೇಕು.

ತಾಯಿ-ತಂದೆಯರು ಸಂತುಷ್ಟರಾದರೆ ಪ್ರತ್ಯಕ್ಷ ಪರಮೇಶ್ವರನೇ ಪ್ರಸನ್ನ ನಾಗುತ್ತಾನೆ. ಇದಕ್ಕಾಗಿ ಮಕ್ಕಳೇ, ತಾಯಿ-ತಂದೆಯ ಮಾತನ್ನು ಕೇಳಿ. ಅವರಿಗೆ ಕೆಲಸಗಳಲ್ಲಿ ಸಹಾಯ ಮಾಡಿ. ಅವರನ್ನು ದೇವರಿಗೆ ಸಮಾನರೆಂದು  ತಿಳಿದು ಕೊಂಡು ಅವರ ಸೇವೆ ಮಾಡಿ ಎಂದು ಸಂಸ್ಕೃತದ ಶ್ಲೋಕದಲ್ಲಿ ಹೇಳಲಾಗಿದೆ.

ಬಾಲ ಮಿತ್ರರೇ, ನೀವು ನಿಮ್ಮ ದೈನಂದಿನ ಆಚರಣೆಯನ್ನು ಸುಸಂಸ್ಕಾರವಾಗಿ ಮಾಡಿ...

ಒಳ್ಳೆಯ ಸಂಸ್ಕಾರವಾಗಲು ಚಿಕ್ಕ ಮಕ್ಕಳಿಗೆ ದಿನಂಪ್ರತಿ ನಿಯಮಾನುಸಾರವಾಗಿ ಕೆಲವು ಪ್ರಾರ್ಥಮಿಕ ವಿಚಾರಗಳನ್ನು ಆಚರಣೆಗೆ ತರುವ ಅವಶ್ಯಕತೆಯಿದೆ.

ದಿನಾಲು ಎದ್ದ ಮೇಲೆ ದೇವರಿಗೆ ನಮಸ್ಕಾರ ಮಾಡಬೇಕು.ಎದ್ದ ನಂತರ ಪ್ರಾತಃ ವಿಧಿ ಸ್ನಾನ ಮಾಡಿಕೊಂಡು ದೇವರಿಗೆ, ತಂದೆ ತಾಯಿಗೆ ಹಾಗು ದೊಡ್ಡವರಿಗೆ ನಮಸ್ಕಾರ ಮಾಡುವುದು.ದಿನಾಲು ಸೂರ್ಯ ನಮಸ್ಕಾರ ಮಾಡುವುದು ಅಥವ ವ್ಯಾಯಾಮ ಮಾಡುವುದು.

ದಿನಾಲು ದೇವರ ಚಿತ್ರವನ್ನು ಒರೆಸಿಟ್ಟು, ಊದುಬತ್ತಿಯನ್ನು ಅಂಟಿಸುವುದು, ಇಲ್ಲವಾದರೆ ಪೂಜೆ ಮಾಡುವುದು, ಸ್ತೋತ್ರ ಪಠಣ, ಶ್ಲೋಕ, ಆರತಿ, ನಾಮಸ್ಮರಣೆ, ಧ್ಯಾನ, ಸಂಧ್ಯಾ ಪೂಜೆ ಇತ್ಯಾದಿಗಳಲ್ಲಿ ಯಾವುದಾದರೂ ಒಂದು ಉಪಾಸನೆ, ಅವರ ವಯಸ್ಸಿನಂತೆ ನಿಯಮಿತವಾಗಿ ಮಾಡುವುದು.ಹಾಲು, ನೀರು ಕುಡಿದ ನಂತರ ತಮ್ಮ ಲೋಟವನ್ನು ಅಥವ ಊಟ-ತಿಂಡಿ ಮಾಡಿದ ನಂತರ ಅವರ ತಟ್ಟೆ ಹಾಗು ಬಟ್ಟಲನ್ನು ಅವರೇ ಸ್ವಚ್ಛಗೊಳಿಸುವುದು.

ಯಾವ ಮಕ್ಕಳ ವಯಸ್ಸು ೧೦-೧೨ವರ್ಷಗಳಿಗಿಂತ ಹೆಚ್ಚಾಗಿರುತ್ತದೋ, ಅವರು ಅವರ ಚಿಕ್ಕ ಚಿಕ್ಕ ಬಟ್ಟೆಗಳನ್ನು ಅವರೇ ಒಗೆದುಕೊಳ್ಳಲು ಪ್ರಾರಂಭಿಸಬೇಕು.ಹೊರಗೆ ಹೋಗಿ ಮನೆಗೆ ಬಂದ ನಂತರ ಪಾದರಕ್ಷೆಯನ್ನು ಹೊರಗಿಟ್ಟು ಕಾಲು ತೊಳೆದುಕೊಂಡ ನಂತರವೇ ಮನೆಯೊಳಗೆ ಪ್ರವೇಶಿಸಬೇಕು.ಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು ಹಾಗು ಚಾಕ್ಲೇಟ್ ತಿಂದ ನಂತರ ಅದರ ಕಾಗದವನ್ನು ಕಸದ ಬುಟ್ಟಿಯಲ್ಲೇ ಬಿಸಾಡಬೇಕು.ಊಟ ಮಾಡುವ ಮೊದಲು ಹಾಗು ಊಟ ಮಾಡಿದ ನಂತರ ಕೈಯನ್ನು ತೊಳೆದುಕೊಳ್ಳಬೇಕು.

ರಾತ್ರಿ ಊಟವಾದ ನಂತರ ಹಲ್ಲನ್ನು ಬ್ರಶ್ಶಿನಿಂದ ಸ್ವಚ್ಛಗೊಳಿಸಬೇಕು.ಅಭ್ಯಾಸ ಮಾಡುವ ಸಾಮಗ್ರಿಗಳನ್ನು, ಆಟದ ಸಾಮಾನು, ಕತೆ ಪುಸ್ತಕಗಳನ್ನು ಹಾಗು ಬೇರೆ ಸಾಮಾನುಗಳನ್ನು, ನಿರ್ಧರಿಸಿದ ಸ್ಥಳದಲ್ಲೇ ಇಡಿ.
ಗೋಡೆಯ ಮೇಲೆ ಬರೆಯುವುದು, ಹಾಸಿಗೆಯನ್ನು ಕೊಳಕಾದ ಕಾಲಿನಿಂದ ತುಳಿಯುವುದು ಮೊದಲಾದ ಅಶಿಸ್ತಿನ ಆಚಾರಣೆಗಳನ್ನು ಮಾಡಬಾರದು. ಶಾಲೆ, ಓದುವುದು, ಸಾಧನೆ ಹಾಗು ವ್ಯಕ್ತಿಗತ ವಸ್ತುಗಳನ್ನು ಜೋಡಿಸಿಕೊಳ್ಳುವುದು, ಆಟವಾಡುವುದು, ಓದುವುದು, ಮನೆಯ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವುದು, ಮನೋರಂಜನೆ ಮೊದಲಾದುವುಗಳ ಸಮಯದ ಸರಣಿಯನ್ನು ಮಾಡಿ ನಿಯೋಜಿಸಿಕೊಳ್ಳಬೇಕು.ಕಸ ಗೂಡಿಸುವುದು, ಸ್ವಚ್ಛತೆ ಮಾಡುವುದು ಇಲ್ಲದಿದ್ದರೆ ಅಡಿಗೆ ಮನೆಯಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುವುದು, ಹೊರಗಿನಿಂದ ಯಾವುದಾದರು ವಸ್ತು ತರಬೇಕಿದ್ದರೆ ಅದು ತರು ಕೆಲಸದಲ್ಲಿ ತಮ್ಮ ತಾವೇ ಸ್ವಯಂ ಪ್ರೇರಣೆಯಿಂದ ಕೆಲಸಗಳನ್ನು ಮಾಡಬೇಕು.

ಏನಾದರೂ ತಿನ್ನಬೇಕಾದರೆ ಯಾರಾದರೂ ಬಂದಲ್ಲಿ ಮೊದಲು ಅವರಿಗೆ ನೀಡಿ.ಯಾವ ವಸ್ತು ಬೇರೆಯವರ ಹತ್ತಿರ ಇದೆಯೋ ಅದು ನಮ್ಮಲ್ಲಿಲ್ಲ, ಆದರೆ ಈಗ ಅದರ ಅವಶ್ಯಕತೆಯಿಲ್ಲ, ಹಾಗಿದ್ದರೆ ಅದನ್ನು ಕೇಳಬಾರದು.ಯಾವಾಗಲೂ ವಿನಮ್ರವಾಗಿ ಮಾತನಾಡಬೇಕು ಹಾಗು ಅದೇ ರೀತಿಯಲ್ಲಿ ಆಚರಿಸಬೇಕು. ಜೋರಾಗಿ ಮಾತನಾಡುವುದು ಹಾಗು ಅನಾವಶ್ಯಕವಾಗಿ ಮಾತನಾಡುವುದನ್ನು ಬಿಡಬೇಕು.

ಅನುಶಾಸನ ಪ್ರಿಯರಾಗಲು ಸಂಬಂಧಿಸಿದ ಮಹತ್ವವಾದ ಸೂಚನೆ

೧. ಒಳ್ಳೆಯ ಆಚರಣೆಯನ್ನು ಪ್ರಶಂಸಿಸುವುದು ಹಾಗು ಅನಾಚರಣೆಗಾಗಿ ದಂಡಿಸುವುದು:ಮಕ್ಕಳು ಪರೀಕ್ಷಯಲ್ಲಿ ಒಳ್ಳೆಯ ಅಂಖಗಳನ್ನು ಪಡೆದಾಗ ಹಾಗು ಪಾರಿತೋಷಕಗಳನ್ನು ಪಡೆದಾಗ ಅವರನ್ನು ಪ್ರಶಂಸಿಸಿ. ಇದರಿಂದ ಅವರು ಒಳ್ಳೆಯ ಆಚರಣೆ ಮಾಡಲು ಮತ್ತಷ್ಟು ಪ್ರೋತ್ಹಾಹಿತರಾಗುತ್ತಾರೆ. ಅವರ ಅಯೋಗ್ಯವಾದ ಆಚರಣೆಗಾಗಿ ಅಪ್ರಸನ್ನತೆಯನ್ನು ವ್ಯಕ್ತಪಡಿಸಿ ಅವಶ್ಯಕತೆಗನುಸಾರವಾಗಿ ದಂಡಿಸಬೇಕು.

೨. ಆಜ್ಞೆ ಮಾಡುವುದಲ್ಲ ಅದರ ಬದಲು ವಿನಂತಿಸಿ: ’ ನೀರು ತೆಗೆದುಕೊಂಡು ಬಾ’, ಎಂದು ಹೇಳುವ ಬದಲು ’ ಮಗು, ನನಗೆ ಒಂದು ಲೋಟದಲ್ಲಿ ನೀರು ತಂದು ಕೊಡುತ್ತೀಯೇನು?’ ಎಂದು ವಿನಂತಿಸಿ

೩. ಮನೆಯ ಸದಸ್ಯರು ಒಂದೇ ಮತವನ್ನು ವಹಿಸುವುದು: ಮಕ್ಕಳನ್ನು ಅನುಶಾಸಿಸುವ ಮೊದಲು ಯಾವ ರೀತಿಯ ಆಚರಣೆಯ ಅಪೇಕ್ಷಯಿದೆ ಎಂಬುವುದರ ಬಗ್ಗೆ ಯೋಚಿಸಿ. ನಿಮ್ಮ ಭೂಮಿಕೆಯ ಬಗ್ಗೆ ಸ್ಪಷ್ಟ ಪಡಿಸಿಕೊಳ್ಳಿ ಹಾಗು ಅದರಲ್ಲಿ ಮತಭೇದ ಮಾಡಬೇಡಿ.
ತಂದೆ ತಾಯಿಯರ ಹಾಗು ಮನೆಯ ಇತರ ವ್ಯಕ್ತಿಗಳ ಸಹಮತವಿರುವುದರಿಂದ, ಮಕ್ಕಳನ್ನು ಅನುಶಾಸಿತಗೊಳಿಸುವುದು ಅತ್ಯಂತ ಅವಶ್ಯಕವಾಗಿದೆ. ಕಿಟಕಿಯ ಮೇಲೆ ಎತ್ತರವಾಗಿ ಹತ್ತಿದಾಗ ತಂದೆ ಪ್ರಶಂಸಿಸುವುದು ಹಾಗು ತಾಯಿ ಕೋಪಗೊಳ್ಳುವುದು, ಈ ರೀತಿ ಆಗಬಾರದು. ಯಾವಾಗ ದಂಡಿಸಬೇಕು, ಎಂಬ ವಿಷಯದಲ್ಲಿ ತಂದೆ-ತಾಯಂದರು ತಮ್ಮ ತಮ್ಮಲ್ಲಿನ ಮತಭೇದವನ್ನು ಮೊದಲೇ ತೀರಿಸಿಕೊಳ್ಳಬೇಕು; ಮಕ್ಕಳ ಮುಂದೆ ಹಾಗೆ ಮಾಡಬಾರದು.

೪. ತಪ್ಪಾದ ತಕ್ಷಣವೇ ದಂಡಿಸಿ: ’ಇರು ಸಂಜೆ ಅಪ್ಪ ಮನೆಗೆ ಬಂದ ಮೇಲೆ ನೋಡೋಣ, ಈ ಪದ್ಧತಿಯಲ್ಲಿ ದಂಡಿಸುವುದು ಅನುಚಿತವಾಗಿದೆ. ಇದರಿಂದ ತಂದೆ ಮನೆಗೆ ಬರುವವರೆಗೂ ಮಗು ದಂಡದ ಭಯದಿಂದ ತತ್ತರಿಸುತ್ತದೆ.

೫.ಯೋಗ್ಯ ಹಾಗು ಅಯೋಗ್ಯ ದಂಡ: ಮಕ್ಕಳೊಂದಿಗೆ ಹೆಚ್ಚು ಕಾಲ ಮಾತನಾಡದೆ ಇರುವುದು ಅಥವ ಅವರನ್ನು ದಿನವೆಲ್ಲ ಉಪವಾಸವಿರಿಸುವುದು, ಈ ಮೊದಲಾದ ರೀತಿಗಳಲ್ಲಿ ದಂಡಿಸುವುದು ಯೋಗ್ಯವಲ್ಲ, ಅದರ ಬದಿಲು ಅವರಿಗೆ ದೂರಚಿತ್ರವಾಣಿಯನ್ನು ನೋಡಲು ಬಿಡದಿರುವುದು, ಈ ರೀತಿ ದಂಡಿಸುವುದು ಯೋಗ್ಯವಾಗಿರುತ್ತದೆ

ಪ್ರಿಯ ಪೋಷಕರೇ...

ಮಕ್ಕಳು ಅನುಕರಣೆ ಪ್ರಿಯರಾಗಿರುತ್ತಾರೆ. ಅನುಕರಿಸುವುದು ಅವರ ಸ್ವಭಾವ. ನಿಮ್ಮ ಪ್ರತ್ಯೇಕ ಆಚರಣೆಯ ಮೇಲೆ ಅಂದರೆ ನಿಮ್ಮ ಹಾವ-ಭಾವ, ಮಾತನಾಡುವುದು ಹಾಗು ವ್ಯವಹಾರ ಇತ್ಯಾದಿಯ ಮೇಲೆ ಗುಪ್ತಚರರ ಹಾಗೆ ಅವರ ಗಮನವಿರುತ್ತದೆ ಹಾಗೂ ಅದನ್ನು ತಮ್ಮದನ್ನಾಗಿಸುವ ಪ್ರವೃತ್ತಿಯಿರುತ್ತದೆ. ಮಕ್ಕಳಿಗೆ ಬೈಗುಳವನ್ನು ಕಲಿಸುವ ಅಗತ್ಯವಿಲ್ಲ, ಆದರೆ ಭಗವಂತನ ಹೆಸರು ತೆಗೆದುಕೊಳ್ಳಲು ಅವರ ಹಿಂದೆ ಬೀಳಬೇಕಾಗುತ್ತದೆ. ಮಕ್ಕಳ ಮೇಲೆ ಸಂಸ್ಕಾರ ನೀಡುವ ಉತ್ತಮ ಉಪಾಯವೆಂದರೆ ಸ್ವಯಂ ನಮ್ಮ ಮೇಲೆ ಸಂಸ್ಕಾರ ಮಾಡಿಕೊಳ್ಳುವುದು. ಅಂದರೆ ಸದ್ಗುಣಗಳ ಉಪಾಸನೆ ಹಾಗೂ ದುರ್ಗುಣಗಳ ನಾಶಮಾಡುವುದು. ಇದನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾದರೂ, ಆಚರಿಸುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ ಸಂಕಲ್ಪದ ಅವಶ್ಯಕತೆ ಇರುತ್ತದೆ. ಸಂಕಲ್ಪವೆಂದರೆ ದೃಢ ನಿಶ್ಚಯ. ಸಾವಿರ ಸಂಕಲ್ಪಗಳನ್ನು ಮಾಡಬಹುದು ಆದರೆ ಎಲ್ಲಾ ಸದ್ಗುಣಗಳನ್ನು ಒಂದೇ ಸಲ ತಮ್ಮದನ್ನಾಗಿಸಿ ಕೊಳ್ಳುವುದು ಅಥವಾ ದುರ್ಗುಣಗಳನ್ನು ಬಿಡುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಂಕಲ್ಪ ಮಾಡುವಾಗ ನಮ್ಮಲ್ಲಿರದ ಯಾವುದಾದರೂ ಒಂದು ಸದ್ಗುಣವನ್ನು ತಮ್ಮದನ್ನಾಗಿಸುವ ಪ್ರಯತ್ನ ನಡೆಸಬೇಕು ಅಥವ ನಮ್ಮ ನಮ್ಮಲ್ಲಿನ ಅನೇಕ ದುರ್ಗುಣಗಳಲ್ಲಿ ಒಂದು ದುರ್ಗಣವನ್ನಾದರೂ ತ್ಯಜಿಸುವ ಸಂಕಲ್ಪವನ್ನು ಮಾಡಬೇಕು. ಹೀಗೆ ಮಾಡುವುದರಿಂದ ಸಂಸ್ಕಾರವು ಒಂದು ರೀತಿಯ ವೃತ್ತಿಯಾಗುತ್ತದೆ. ಮಕ್ಕಳಿಗೆ ಉಚಿತ ಸಂಸ್ಕಾರ ನೀಡುವುದಕ್ಕಾಗಿ ತಪಶ್ಚರ್ಯೆಯನ್ನು ಅಂದರೆ ಸಾಧನೆಯನ್ನೇ ಮಾಡಬೇಕಾಗುತ್ತದೆ. - ಶ್ರೀಮತಿ ಅರ್ಚನ ಖೇಮಕಾ, ಜಯಪುರ್, ರಾಜಸ್ಥಾನ